‘ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರು ಹೃದಯ ಶ್ರೀಮಂತಿಕೆ ಉಳ್ಳ ನಾಯಕರು. ಅವರು ಬೂಟಾಟಿಕೆ ಮಾಡುವುದಿಲ್ಲ, ಅನ್ಯಾಯವನ್ನು ಸಹಿಸುವುದಿಲ್ಲ. ನಾವೆಲ್ಲ ವಿದ್ಯಾರ್ಥಿ ದೆಸೆಯಿಂದಲೇ ಪರಸ್ಪರ ಬಲ್ಲವರು. ನಾನು ನಾಲ್ಕು ಬಾರಿ ಶಾಸಕನಾಗಿ, ಸಚಿವ ಕೂಡ ಆಗಿದ್ದೆ. ಅಂಜನಪ್ಪ ಅವರು ಈ ಮೊದಲೇ ಶಾಸಕರಾಗಬೇಕಿತ್ತು. ಆದರೆ. ದುರಾದೃಷ್ಟ ಆಗಲಿಲ್ಲ. ಈ ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿ ಸಚಿವರು ಸಹ ಆಗುತ್ತಾರೆ. ಡಿ.9ರ ನಂತರ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗುತ್ತದೆ’ ಎಂದರು.