ಪಟ್ಟಣದ 1ನೇ ವಾರ್ಡ್ ರೈತ, ಹೌಸಿಂಗ್ ಬೋರ್ಡ್ನ ನಿವಾಸಿ ಸುಜಾತಮ್ಮ ಹಾಗೂ ಜಯರಾಮಪ್ಪ ದಂಪತಿಯ ಮುಸಕಿನ ಜೋಳದ ಮೆದೆಗೆ ಬೆಂಕಿ ಕಿಡಿಗಳು ಹೊತ್ತಿಕೊಂಡು ಹುಲ್ಲು ಸಂಪೂರ್ಣವಾಗಿ ಸುಟ್ಟಿದೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಠಾಣೆಯ ಪ್ರಮುಖ ಠಾಣಾಧಿಕಾರಿ ರಾಘವೇಂದ್ರ ಚನ್ನೇಗೌಡಪಾಟೀಲ್, ಸಿಬ್ಬಂದಿ ಮೈಲಾರಪ್ಪ, ಯೂಸಫ್, ಸಂಜುರುದ್ರಪ್ಪ ಬೆಂಕಿ ನಂದಿಸಿದ್ದಾರೆ. ಪುರಸಭಾ ಸದಸ್ಯ ಶ್ರೀನಾಥ್ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.