‘ತಾರನೇಯ ಸಾಯಿ ಸ್ವಾಮೀಜಿ ಅವರು ಆಗಾಗ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ಬರುತ್ತಿದ್ದರು. ಎರಡು ವರ್ಷಗಳ ಹಿಂದೆ ನಮ್ಮ ಮಗ ತೀರಿಕೊಂಡ ಕಾರಣ ನಾವು ಮಾನಸಿಕ ನೆಮ್ಮದಿ ಅರಸಿ ಆಗಾಗ ಸತ್ಯಸಾಯಿ ಗ್ರಾಮಕ್ಕೆ ಹೋಗುತ್ತಿದ್ದೆವು. ಅಲ್ಲಿ ಸ್ವಾಮೀಜಿ ಅವರ ಪರಿಚಯವಾಗಿತ್ತು. ಅವರು ನಮ್ಮ ಜಮೀನಿನಲ್ಲಿ ಯೋಗ ಸಮಾಧಿ ನಡೆಸುವ ಜತೆಗೆ ಶಿವನ ದೇವಾಲಯ, ಯೋಗ, ಧ್ಯಾನ ಕೇಂದ್ರ ನಿರ್ಮಿಸುವ ಬಗ್ಗೆ ಸಲಹೆ ನೀಡಿದ್ದರು. ಅದಕ್ಕೆ ನಾವು ಸಹ ಒಪ್ಪಿಕೊಂಡಿದ್ದೆವು. ಆದರೆ ನಮಗೆ ಕಾನೂನುಗಳ ಬಗ್ಗೆ ಗೊತ್ತಿರಲಿಲ್ಲ’ ಎಂದು ಹೇಳಿದರು.