ತಾಲ್ಲೂಕಿನ ಮಂಡಿಕಲ್ ಹೋಬಳಿಯ ಗುಂಡ್ಲ ಮಂಡಿಕಲ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪರ ಶನಿವಾರ ಪ್ರಚಾರ ನಡೆಸಿದ ಅವರು, ‘ಹಿಂದೆಲ್ಲ ಸುಧಾಕರ್ ಅವರು ಸಂಕ್ರಾಂತಿ ಸುಗ್ಗಿಗೆ ರಂಗೋಲಿ ಹಾಕ್ಸಿದ್ದೇನು?, ಮಿಕ್ಸಿ, ಕುಕ್ಕರ್, ಸೀರೆ ಹಂಚಿದ್ದೇನು? ಆದರೆ ಈ ಬಾರಿ ಹಬ್ಬನೂ ಇಲ್ಲ, ರಂಗೋಲಿ ಸ್ಪರ್ಧೆನೂ ಇಲ್ಲ. ಮತ ದೋಚುವ ಆಸೆಗೆ ಕುಟಿಲ ತಂತ್ರಗಳನ್ನು ಬಳಸುವ ಮೋಸಗಾರ, ನಯವಂಚಕ ಸುಧಾಕರ್ ಅವರಿಗೆ ದಯಮಾಡಿ ಯಾರೂ ಮತ ನೀಡಬಾರದು’ ಎಂದು ತಿಳಿಸಿದರು.