‘ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು. ಅನುದಾನಕ್ಕೆ ಒಳಪಡಿಸುವವರೆಗೆ ಸರ್ಕಾರಿ, ಅನುದಾನಿತ ನೌಕರರಂತೆ ಸೇವಾ ಭದ್ರತೆ ಒದಗಿಸುವುದು. ಕೇಂದ್ರ ಮಾದರಿ ವೇತನವನ್ನು ರಾಜ್ಯ ನೌಕರರಿಗೂ ವಿಸ್ತರಿಸಲು ಹೋರಾಟ. ಕಾಲಮಿತಿ ಬಡ್ತಿ, ಸಮಯಕ್ಕೆ ಸರಿಯಾಗಿ ವೇತನ, ಕಡತ ವಿಲೇವಾರಿ ಹಾಗೂ ಇತರೆ ಬೇಡಿಕೆಗಳನ್ನು ಕೂಡಲೇ ಮಂಜೂರು ಮಾಡುವುದು, ವರ್ಗಾವಣೆಯನ್ನು ನಿಗದಿತ ಸಮಯದಲ್ಲಿ ಹಾಗೂ ಸರಳೀಕರಣಗೊಳಿಸುವ ಗುರಿ ಹೊಂದಿದ್ದೇನೆ’ ಎಂದರು.