ರೈಲಿಗೆ ಸಿಕ್ಕ ಮೂವರ ದೇಹ ಮಾಂಸದ ಮುದ್ದೆಯಂತೆ ಆಗಿದ್ದು, ಗುರುತು ಸಿಗುತ್ತಿಲ್ಲ. ಸ್ಥಳದಲ್ಲಿ ಕರಡಿಗೆ ಸಹ ದೊರೆತಿದ್ದು, ಮೃತಪಟ್ಟವರು ಲಿಂಗಾಯತರು ಇರಬಹುದು ಎನ್ನುವ ಸಂಶಯ ರೈಲ್ವೆ ಪೊಲೀಸರಲ್ಲಿದೆ. ಈ ಮೂವರು ಒಂದೇ ಕುಟುಂಬದವರೇ ಅಥವಾ ಬೇರೆ ಕುಟುಂಬದವರೇ ಎನ್ನುವುದು ಖಚಿತವಾಗಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.