ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ರೈಲಿಗೆ ಸಿಲುಕಿ ಮೂವರು ಸಾವು

Last Updated 9 ಜನವರಿ 2023, 19:31 IST
ಅಕ್ಷರ ಗಾತ್ರ

ಗೌರಿಬಿದನೂರು (ಚಿಕ್ಕಬಳ್ಳಾಪುರ): ತಾಲ್ಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪ ಸೋಮವಾರ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆ ಇರಬಹುದು ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.

50ರಿಂದ 55 ವರ್ಷ ಪ್ರಾಯದ ಪುರುಷ, 45ರಿಂದ 50 ವರ್ಷದ ಮಹಿಳೆ ಮತ್ತು 20ರಿಂದ 25 ವರ್ಷದ ಯುವತಿ ಮೃತಪಟ್ಟಿದ್ದಾರೆ. ವ್ಯಕ್ತಿಯ ಟೀ ಶರ್ಟ್‌ ಮೇಲೆ ‘ವಿನಾಯಕ ಟೈಲರ್ ಗೌರಿಬಿದನೂರು’ ಎನ್ನುವ ಸ್ಟಿಕ್ಕರ್ ಇದೆ.

ರೈಲಿಗೆ ಸಿಕ್ಕ ಮೂವರ ದೇಹ ಮಾಂಸದ ಮುದ್ದೆಯಂತೆ ಆಗಿದ್ದು, ಗುರುತು ಸಿಗುತ್ತಿಲ್ಲ. ಸ್ಥಳದಲ್ಲಿ ಕರಡಿಗೆ ಸಹ ದೊರೆತಿದ್ದು, ಮೃತಪಟ್ಟವರು ಲಿಂಗಾಯತರು ಇರಬಹುದು ಎನ್ನುವ ಸಂಶಯ ರೈಲ್ವೆ ಪೊಲೀಸರಲ್ಲಿದೆ. ಈ ಮೂವರು ಒಂದೇ ಕುಟುಂಬದವರೇ ಅಥವಾ ಬೇರೆ ಕುಟುಂಬದವರೇ ಎನ್ನುವುದು ಖಚಿತವಾಗಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತ ದೇಹಗಳನ್ನು ಸಂಗ್ರಹಿಸಿ ಬೆಂಗಳೂರಿನ ‌ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT