‘ಮುರುಗಮಲ್ಲ ಗ್ರಾಮದಿಂದ ಹೊರಟು ಗುಂಡ್ಲಹಳ್ಳಿ ಗ್ರಾಮದ ಗೇಟ್ ಬಳಿ ವಾಹನವನ್ನು ನಿಲ್ಲಿಸಿ, ಬಂಡೆಯ ಮೇಲೆ ಕುಳಿತಿರುವಾಗ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಒದ್ದು ಕೆಳಗೆ ದಬ್ಬಿ, ಕಲ್ಲಿನಿಂದ ಮುಖದ ಮೇಲೆ ಜಜ್ಜಿದ್ದಾನೆ. ಅದೇ ಸಮಯಕ್ಕೆ ದ್ವಿಚಕ್ರವಾಹನದಲ್ಲಿ ಬಂದ ರವಿ ಇಬ್ಬರೂ ಸ್ನೇಹಿತರು ಸೇರಿಕೊಂಡು ಕೈ,ಕಾಲುಗಳನ್ನು ಹಿಡಿದು ಎತ್ತಿ ಬಿಸಾಡಿದರು. ಬೆನ್ನಿಗೆ ಮತ್ತು ಭುಜಕ್ಕೆ ಬಲವಾದ ಗಾಯಗಳಾಗಿವೆ’ ಎಂದು ದೂರಿದ್ದಾರೆ.