ಪಟ್ಟಣಕ್ಕೆ ಆಂಧ್ರಪ್ರದೇಶ ಕೇವಲ 3 ಕಿ.ಮೀ ದೂರದಲ್ಲಿದೆ. ಆಂಧ್ರಪ್ರದೇಶದ ಗೋರಂಟ್ಲ, ಹಿಂದೂಪುರ, ಪುಟ್ಟಪರ್ತಿ, ಅನಂತಪುರ ಕಡೆಗೆ ಹಾಗೂ ಚಿಕ್ಕಬಳ್ಳಾಪುರ ಮಾರ್ಗದ ಮೂಲಕ ಬೆಂಗಳೂರಿಗೆ ರಸ್ತೆ ಸಾರಿಗೆ ಬಸ್ಗಳು ಸಂಚರಿಸುತ್ತವೆ. ಆದರೆ, ಪಟ್ಟಣದಿಂದ ಮಿಟ್ಟೇಮರಿ ಮಾರ್ಗದ ಮೂಲಕ ಚಿಂತಾಮಣಿ, ಪಾತಪಾಳ್ಯ ಮೂಲಕ ಬಿಳ್ಳೂರು, ಚಾಕವೇಲು, ಸೋಮನಾಥಪುರ ಚೇಳೂರು ಹಾಗೂ ಗೂಳೂರು ಮಾರ್ಗದ ಮೂಲಕ ಮಾರ್ಗಾನುಕುಂಟೆ, ಗೊರ್ತಪಲ್ಲಿ ಕಡೆಗೆ ಬೆಳಿಗ್ಗೆ-ಸಂಜೆ ಮಾತ್ರ ಬೆರಳೆಣಿಕೆಯಷ್ಟು ಬಸ್ಗಳು ಸಂಚರಿಸುತ್ತವೆ. ತೀವ್ರ ತೊಂದರೆಯಾಗಿದೆ.