ಗ್ರಾಮದ ಸುಧಾಕರ್ ಎಂಬುವವರ ಮಗ ಕೆ.ಎಸ್. ಪ್ರಶಾಂತ್(21) ಮೃತ ಯುವಕ. ನಗರದ ಕಾಲೇಜು ಒಂದರಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಮಂಗಳವಾರ ರಾತ್ರಿ ತಮ್ಮ ಮನೆಯ ಹಾಲನ್ನು ಪಕ್ಕದ ಗ್ರಾಮದಲ್ಲಿರುವ ಯನಮಲಪಾಡಿ ಡೇರಿಗೆ ಕೊಡಲು ಹೋಗಿದ್ದ. ಹಾಲು ಹಾಕಿ ವಾಪಸ್ ಗ್ರಾಮಕ್ಕೆ ಬರುತ್ತಿರುವಾಗ ರಸ್ತೆ ಅಪಘಾತ ಸಂಭವಿಸಿದೆ.