ಚಿಕ್ಕಬಳ್ಳಾಪುರ: ‘ಮಕ್ಕಳಿಂದ ಪರಿತ್ಯಕ್ತ ಹಿರಿಯ ನಾಗರಿಕರು ಹಳೆಯ ಕಹಿ ಘಟನೆಗಳನ್ನು ನೆನೆದು ಕೊರಗದೆ, ವೃದ್ಧಾಶ್ರಮದ ಪರಿಸರದಲ್ಲಿ ಪುಸ್ತಕಗಳನ್ನು ಓದುವುದು, ಆಧ್ಯಾತ್ಮ, ಸಂಗೀತ ಮುಂತಾದ ಚಟುವಟಿಕೆಗಳ ಮೂಲಕ ತಮ್ಮ ನೋವನ್ನು ಮರೆತು ಜೀವನದ ಸಂಧ್ಯಾಕಾಲವನ್ನು ನೆಮ್ಮದಿಯಿಂದ ಕಳೆಯಲು ಪ್ರಯತ್ನಿಸಬೇಕು’ ಎಂದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಹೇಳಿದರು.