ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ವರ್ಷ ತೊಡಕಿಗೆ ತೊಡಕಾಗದ ಲಾಕ್‌ಡೌನ್‌

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ನಿರ್ಬಂಧ: ಶಾಸ್ತ್ರಕ್ಕೆ ಸೀಮಿತವಾದ ಯುಗಾದಿ ಆಚರಣೆ
Last Updated 26 ಮಾರ್ಚ್ 2020, 9:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪ್ರತಿ ವರ್ಷದ ಸಂಭ್ರಮದಿಂದ ಜನರು ಆಚರಿಸುತ್ತಿದ್ದ ಯುಗಾದಿ ಹಬ್ಬ ಕೊರೊನಾ ವೈರಸ್‌ ಸೋಂಕಿನ ತಲ್ಲಣದಿಂದಾಗಿ ಈ ಬಾರಿ ಮನೆಯಲ್ಲಿ ಸರಳವಾಗಿ ಶಾಸ್ತ್ರಕ್ಕೆ ಸಿಮೀತವಾದರೆ, ಯುಗಾದಿ ಮಾರನೆ ದಿನ ಆಚರಿಸುವ ವರ್ಷ ತೊಡಕು ಆಚರಣೆ ಎಂದಿನಂತೆ ನಡೆಯಿತು.

ಮಾರಣಾಂತಿಕ ಸೋಂಕು ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ 21 ದಿನಗಳ ಲಾಕ್‌ಡೌನ್‌ ಘೋಷಿಸಿದ್ದೇ, ಜನರು ಮನೆಯ ಒಳಗೆ ಹಬ್ಬ ಆಚರಿಸಬೇಕಾಯಿತು. ಆದರೆ ತೊಡಕು ಆಚರಣೆಯನ್ನು ಜಿಲ್ಲೆಯಲ್ಲಿ ಗುರುವಾರ ಲಾಕ್‌ಡೌನ್‌ ನಡುವೆಯೂ ಜನರು ಸಂಭ್ರಮದಿಂದ ಆಚರಿಸಿದರು.

ಗೃಹ ಬಂಧಿಯಾಗಿರುವ ಜನರು ಬುಧವಾರ ಮನೆಯಲ್ಲಿ ಬೇವು -ಬೆಲ್ಲ, ಹೋಳಿಗೆ ಊಟ ತಿಂದು ಯುಗಾದಿ ಆಚರಿಸಿದ್ದರು. ಆದರೆ, ಕಠಿಣ ನಿರ್ಬಂಧದ ನಡುವೆಯೂ ಗುರುವಾರ ಜಿಲ್ಲೆಯಾದ್ಯಂತ ಮಟನ್‌ ವ್ಯಾಪಾರ ಜೋರಾಗಿಯೇ ಕಂಡುಬಂತು.

ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾದ್ದರಿಂದ ಜನರು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಜತೆಗೆ ಜಗತ್ತನ್ನು ತಲ್ಲಣಕ್ಕೆ ದೂಡಿರುವ ಕೊರೊನಾ ಮಹಾಮಾರಿ ಕೂಡ ಬೇಗ ತೊಲಗಲಿ ಎಂದು ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT