<p><strong>ಶಿಡ್ಲಘಟ್ಟ:</strong> ನಗರದ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಪುರಂದರದಾಸ, ತ್ಯಾಗರಾಜಸ್ವಾಮಿ, ಕನಕದಾಸ, ಶ್ರೀಯೋಗಿ ನಾರೇಯಣ ಯತೀಂದ್ರರು ಸೇರಿದಂತೆ ವಾಗ್ಗೇಯಕಾರರ ಆರಾಧನಾ ಮಹೋತ್ಸವ ನಡೆಯಿತು.</p>.<p>ಕೈವಾರ ಯತೀಂದ್ರರ ಮಠ, ಮಾರುತಿ ಸಂಗೀತ ಅಕಾಡೆಮಿ ಮತ್ತು ಕಾಳಿಕಾಂಬ ಕಮಠೇಶ್ವರ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಳಿಕಾಂಬ ಕಮಠೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪಂಚಾಮೃತಾಭಿಷೇಕ, ವಜ್ರಾಂಗಿ ಅಲಂಕಾರ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.</p>.<p>ಬಳಿಕ ನಾದಸ್ವರ ವಿದ್ವಾನ್ ದೊಡ್ಡದಾಸೇನಹಳ್ಳಿ ಮುನಿನಾರಾಯಣಪ್ಪ ಅವರಿಂದ ನಾದಸ್ವರ ಕಛೇರಿ ನಡೆಯಿತು. ಮಂಜುಳ ಜಗದೀಶ್, ಶಾಂತ ಕೃಷ್ಣಮೂರ್ತಿ, ಸವಿತ ಸುಬ್ರಮಣ್ಯಂ, ಹೇಮಾ ಬಾಲಾಜಿ, ಉಷಾ ನಾರಾಯಣಮೂರ್ತಿ, ಸೌಭಾಗ್ಯಲಕ್ಷ್ಮಿ, ಸ್ಪಂದನ ಸೇರಿದಂತೆ ಹಲವು ವಿದ್ವಾನ್, ವಿದುಷಿಯರು ಸಂಗೀತ ಕಛೇರಿ ನಡೆಸಿಕೊಟ್ಟರು.</p>.<p>ಆರ್.ಜಗದೀಶ್ ಕುಮಾರ್, ಜಿ.ಎಸ್.ಶಾಮಸುಂದರ್, ಗಾಯಿತ್ರಿ, ವಿಜಯ್ ಕುಮಾರ್, ನವೀನ್ ಕುಮಾರ್ ಮೊದಲಾದವರು ಪಿಟೀಲು ನುಡಿಸಿದರೆ, ವಿ.ಪಿ.ರಘುನಾಥ್ರಾವ್, ರವಿತೇಜ, ಲಕ್ಷ್ಮಿನಾರಾಯಣ್, ಮೋಹನ್ ಕುಮಾರ್, ವಿನಯ್ ಕುಮಾರ್, ರುದ್ರಾಚಾರಿ, ಕಾರ್ತಿಕ್ ಅವರ ತಂಡ ಮೃದಂಗ ನುಡಿಸಿತು.</p>.<p>ಮಂಜುಳ ಜಗದೀಶ್ ನೇತೃತ್ವದಲ್ಲಿ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ ನಡೆದರೆ, ಡಾ.ಎಂ.ವಿ.ಶ್ರೀನಿವಾಸಮೂರ್ತಿ ಸಂಗೀತ ಕಛೇರಿ ನಡೆಸಿಕೊಟ್ಟರು. ಸಂಜೆ ವಿದ್ವಾನ್ ವಿಶ್ವನಾಥ್ ಅವರಿಂದ ಸೋಲೋ ವಾದನ ಮತ್ತು ಆಹ್ವಾನಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ನಗರದ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಪುರಂದರದಾಸ, ತ್ಯಾಗರಾಜಸ್ವಾಮಿ, ಕನಕದಾಸ, ಶ್ರೀಯೋಗಿ ನಾರೇಯಣ ಯತೀಂದ್ರರು ಸೇರಿದಂತೆ ವಾಗ್ಗೇಯಕಾರರ ಆರಾಧನಾ ಮಹೋತ್ಸವ ನಡೆಯಿತು.</p>.<p>ಕೈವಾರ ಯತೀಂದ್ರರ ಮಠ, ಮಾರುತಿ ಸಂಗೀತ ಅಕಾಡೆಮಿ ಮತ್ತು ಕಾಳಿಕಾಂಬ ಕಮಠೇಶ್ವರ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಳಿಕಾಂಬ ಕಮಠೇಶ್ವರಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಪಂಚಾಮೃತಾಭಿಷೇಕ, ವಜ್ರಾಂಗಿ ಅಲಂಕಾರ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.</p>.<p>ಬಳಿಕ ನಾದಸ್ವರ ವಿದ್ವಾನ್ ದೊಡ್ಡದಾಸೇನಹಳ್ಳಿ ಮುನಿನಾರಾಯಣಪ್ಪ ಅವರಿಂದ ನಾದಸ್ವರ ಕಛೇರಿ ನಡೆಯಿತು. ಮಂಜುಳ ಜಗದೀಶ್, ಶಾಂತ ಕೃಷ್ಣಮೂರ್ತಿ, ಸವಿತ ಸುಬ್ರಮಣ್ಯಂ, ಹೇಮಾ ಬಾಲಾಜಿ, ಉಷಾ ನಾರಾಯಣಮೂರ್ತಿ, ಸೌಭಾಗ್ಯಲಕ್ಷ್ಮಿ, ಸ್ಪಂದನ ಸೇರಿದಂತೆ ಹಲವು ವಿದ್ವಾನ್, ವಿದುಷಿಯರು ಸಂಗೀತ ಕಛೇರಿ ನಡೆಸಿಕೊಟ್ಟರು.</p>.<p>ಆರ್.ಜಗದೀಶ್ ಕುಮಾರ್, ಜಿ.ಎಸ್.ಶಾಮಸುಂದರ್, ಗಾಯಿತ್ರಿ, ವಿಜಯ್ ಕುಮಾರ್, ನವೀನ್ ಕುಮಾರ್ ಮೊದಲಾದವರು ಪಿಟೀಲು ನುಡಿಸಿದರೆ, ವಿ.ಪಿ.ರಘುನಾಥ್ರಾವ್, ರವಿತೇಜ, ಲಕ್ಷ್ಮಿನಾರಾಯಣ್, ಮೋಹನ್ ಕುಮಾರ್, ವಿನಯ್ ಕುಮಾರ್, ರುದ್ರಾಚಾರಿ, ಕಾರ್ತಿಕ್ ಅವರ ತಂಡ ಮೃದಂಗ ನುಡಿಸಿತು.</p>.<p>ಮಂಜುಳ ಜಗದೀಶ್ ನೇತೃತ್ವದಲ್ಲಿ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ ನಡೆದರೆ, ಡಾ.ಎಂ.ವಿ.ಶ್ರೀನಿವಾಸಮೂರ್ತಿ ಸಂಗೀತ ಕಛೇರಿ ನಡೆಸಿಕೊಟ್ಟರು. ಸಂಜೆ ವಿದ್ವಾನ್ ವಿಶ್ವನಾಥ್ ಅವರಿಂದ ಸೋಲೋ ವಾದನ ಮತ್ತು ಆಹ್ವಾನಿತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>