ಚಿಕ್ಕಬಳ್ಳಾಪುರ: ‘ಭಾರತೀಯ ಸೇನೆಗೆ ಆರ್ಎಸ್ಎಸ್ನವರನ್ನು ವಾಮಮಾರ್ಗದಲ್ಲಿ ಸೇರಿಸಿ ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುವ ಉದ್ದೇಶದಿಂದ ‘ಅಗ್ನಿಪಥ ಯೋಜನೆ’ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯಿಲಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸೇನೆ ಯಾವುದೇ ಪಕ್ಷಕ್ಕೂ ಸೇರಿಲ್ಲ. ಸೈನಿಕರು ದಿನದ 24 ಗಂಟೆಯೂ ಪ್ರಾಣ ಲೆಕ್ಕಿಸದೆ ಕೆಲಸ ಮಾಡುತ್ತಾರೆ.ನಾಲ್ಕು ವರ್ಷಗಳು ಮಾತ್ರ ಸೇವೆಗೆ ಅವಕಾಶ ಇದೆ ಎನ್ನುವುದರ ಹಿಂದೆ ಕುತಂತ್ರ ಮತ್ತು ಹುನ್ನಾರವಿದೆ’ ಎಂದು ದೂರಿದರು.
ಎರಡು– ಮೂರು ವರ್ಷಗಳಿಂದ ಸೇನೆಗೆ ನೇಮಕಾತಿ ಆಗಿಲ್ಲ. ಲಕ್ಷಾಂತರ ಯುವಕರು ಸೈನ್ಯದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.