<p><strong>ಗೌರಿಬಿದನೂರು:</strong> ವಿದುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವದ ಅಂಗವಾಗಿ ಯುಗಾದಿ ಹಬ್ಬದಂದು ಆರಂಭವಾಗಿರುವ ದನಗಳ ಜಾತ್ರೆಯು ರಾಮನವಮಿವರೆಗೆ ಮುಂದುವರಿಯಲಿದೆ.</p>.<p>ಕರ್ನಾಟಕದ ಹೊಸಕೋಟೆ, ದೇವನಹಳ್ಳಿ, ತುಮಕೂರು, ಶಿರಾ, ಗುಬ್ಬಿ, ರಾಯಚೂರು ಹಾಗೂ ಆಂಧ್ರಪ್ರದೇಶದ ಗೋರೆಂಟ್ಲ, ಧರ್ಮವರಂ, ಅನಂತಪುರ ಹಾಗೂ ತಮಿಳುನಾಡು ಸೇರಿದಂತೆ ಇತರೆ ಪ್ರದೇಶಗಳಿಂದಲೂ ರೈತರು ಎತ್ತುಗಳ ಖರೀದಿಗೆ ಬರುತ್ತಿದ್ದಾರೆ.</p>.<p>ಈ ಬಾರಿಯ ಜಾತ್ರೆಯಲ್ಲಿ ₹50 ಸಾವಿರದಿಂದ ₹3 ಲಕ್ಷ ಬೆಲೆ ಬಾಳುವ ರಾಜ್ಯದ ಹಾಗೂ ಹೊರರಾಜ್ಯದ ಎತ್ತುಗಳು ರೈತರ ಗಮನ ಸೆಳೆಯುತ್ತಿವೆ. ಕರ್ನಾಟಕದ ಹೆಮ್ಮೆಯ ಹಳ್ಳಿಕಾರ್ ಮತ್ತು ಖಿಲಾರಿ, ಅಮೃತ್ ಮಹಲ್ ಎತ್ತುಗಳು ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿವೆ. ಆಂಧ್ರಪ್ರದೇಶದ ಕೆಲವು ಜಾತಿಯ ಎತ್ತುಗಳು ಪಾಲ್ಗೊಂಡಿದ್ದವು.</p>.<p>ಖರೀದಿಯಲ್ಲಿ ತೊಡಗಿರುವ ರೈತರು ಎತ್ತುಗಳ ಶಕ್ತಿ, ವಯಸ್ಸು, ಹಲ್ಲುಗಳು, ಸುಡಿಗಳು, ಬೆಳೆವಣಿಗೆ, ಕಣ್ಣು ಚರ್ಮ, ಉಳುಮೆಯ ಅನುಭವ ಮತ್ತು ದೀರ್ಘಕಾಲದ ಉಪಯೋಗ ಹೀಗೆ ಹಲವು ವಿಧದಲ್ಲಿ ಪರೀಕ್ಷೆ ಮಾಡಿ ತಮ್ಮ ಶಕ್ತಿಯಾನುಸಾರ ಖರೀದಿ ಮಾಡಿದರು.</p>.<p>ಮುಜರಾಯಿ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಜಾತ್ರೆಗೆ ಬಂದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಪಶು ವೈದ್ಯ ಇಲಾಖೆಯಿಂದ ಜಾನುವಾರುಗಳಿಗೆ ಆರೋಗ್ಯ ಪರೀಕ್ಷೆ ಸೇವೆಗಳನ್ನು ಕಲ್ಪಿಸಲಾಯಿತು. ಈ ಬಾರಿಯ ದನಗಳ ಜಾತ್ರೆಗೆ ಸುಂಕ ವಿನಾಯಿತಿ ನೀಡಿರುವುದು ರೈತರಿಗೆ ಪ್ರೋತ್ಸಾಹವಾಗಿದೆ.</p>.<p>ಜಾತ್ರೆ ಕೊನೆದಿನ ಉತ್ತಮ ರಾಸುಗಳಿಗೆ ಪ್ರಥಮ, ದ್ವೀತಿಯ, ತೃತೀಯ ಬಹುಮಾನಗಳನ್ನು ಮುಜರಾಯಿ ಇಲಾಖೆಯಿಂದ ನೀಡಲಾಗುವುದು. ಒಟ್ಟಿನಲ್ಲಿ ಈ ಬಾರಿಯ ವಿದುರಾಶ್ವತ್ಥ ದನಗಳ ಜಾತ್ರೆ ರೈತರಿಗೆ ಉತ್ಸಾಹ ನೀಡುವ ಹಾಗೂ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಮಹತ್ವದ ಜಾತ್ರೆಯಾಗಿತ್ತು.</p>.<div><blockquote>ದನಗಳ ಜಾತ್ರೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಜರಾಯಿ ಇಲಾಖೆ ಎಲ್ಲ ಸೂಕ್ತ ಕ್ರಮ ಕೈಗೊಂಡಿದೆ. ರೈತರು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.</blockquote><span class="attribution">ಪಿ.ಎ.ಮರಿರಾಜು, ಕಾರ್ಯನಿರ್ವಹಣಾಧಿಕಾರಿ, ವಿದುರಾಶ್ವತ್ಥ ನಾರಾಯಣಸ್ವಾಮಿ ದೇವಸ್ಥಾನ</span></div>.<p>ವಿದುರಾಶ್ವತ್ಥದಲ್ಲಿ ದಶಕಗಳ ಹಿಂದೆ ಇಂತಹ ಕಳೆಗಟ್ಟಿದ ದನಗಳ ಜಾತ್ರೆ ನಡೆಯುತ್ತಿತ್ತು. ನಂತರ ಜಾತ್ರೆ ಕಳೆಗುಂದಿತ್ತು. ಈಗ ಮತ್ತೆ ದೊಡ್ಡ ಮಟ್ಟದಲ್ಲಿ ರೈತರು ಪಾಲ್ಗೊಂಡಿದ್ದಾರೆ. ರೈತರಲ್ಲಿ ಸಂತಸ ಹೆಚ್ಚಿಸಿದೆ, ರಾಸುಗಳ ಮಾರಾಟ ಮತ್ತು ಖರೀದಿಗೆ ಬಹು ಆಯ್ಕೆಗಳಿವೆ.</p><p>ಸಿದ್ದಪ್ಪ, ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು:</strong> ವಿದುರಾಶ್ವತ್ಥ ನಾರಾಯಣಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವದ ಅಂಗವಾಗಿ ಯುಗಾದಿ ಹಬ್ಬದಂದು ಆರಂಭವಾಗಿರುವ ದನಗಳ ಜಾತ್ರೆಯು ರಾಮನವಮಿವರೆಗೆ ಮುಂದುವರಿಯಲಿದೆ.</p>.<p>ಕರ್ನಾಟಕದ ಹೊಸಕೋಟೆ, ದೇವನಹಳ್ಳಿ, ತುಮಕೂರು, ಶಿರಾ, ಗುಬ್ಬಿ, ರಾಯಚೂರು ಹಾಗೂ ಆಂಧ್ರಪ್ರದೇಶದ ಗೋರೆಂಟ್ಲ, ಧರ್ಮವರಂ, ಅನಂತಪುರ ಹಾಗೂ ತಮಿಳುನಾಡು ಸೇರಿದಂತೆ ಇತರೆ ಪ್ರದೇಶಗಳಿಂದಲೂ ರೈತರು ಎತ್ತುಗಳ ಖರೀದಿಗೆ ಬರುತ್ತಿದ್ದಾರೆ.</p>.<p>ಈ ಬಾರಿಯ ಜಾತ್ರೆಯಲ್ಲಿ ₹50 ಸಾವಿರದಿಂದ ₹3 ಲಕ್ಷ ಬೆಲೆ ಬಾಳುವ ರಾಜ್ಯದ ಹಾಗೂ ಹೊರರಾಜ್ಯದ ಎತ್ತುಗಳು ರೈತರ ಗಮನ ಸೆಳೆಯುತ್ತಿವೆ. ಕರ್ನಾಟಕದ ಹೆಮ್ಮೆಯ ಹಳ್ಳಿಕಾರ್ ಮತ್ತು ಖಿಲಾರಿ, ಅಮೃತ್ ಮಹಲ್ ಎತ್ತುಗಳು ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿವೆ. ಆಂಧ್ರಪ್ರದೇಶದ ಕೆಲವು ಜಾತಿಯ ಎತ್ತುಗಳು ಪಾಲ್ಗೊಂಡಿದ್ದವು.</p>.<p>ಖರೀದಿಯಲ್ಲಿ ತೊಡಗಿರುವ ರೈತರು ಎತ್ತುಗಳ ಶಕ್ತಿ, ವಯಸ್ಸು, ಹಲ್ಲುಗಳು, ಸುಡಿಗಳು, ಬೆಳೆವಣಿಗೆ, ಕಣ್ಣು ಚರ್ಮ, ಉಳುಮೆಯ ಅನುಭವ ಮತ್ತು ದೀರ್ಘಕಾಲದ ಉಪಯೋಗ ಹೀಗೆ ಹಲವು ವಿಧದಲ್ಲಿ ಪರೀಕ್ಷೆ ಮಾಡಿ ತಮ್ಮ ಶಕ್ತಿಯಾನುಸಾರ ಖರೀದಿ ಮಾಡಿದರು.</p>.<p>ಮುಜರಾಯಿ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಜಾತ್ರೆಗೆ ಬಂದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಪಶು ವೈದ್ಯ ಇಲಾಖೆಯಿಂದ ಜಾನುವಾರುಗಳಿಗೆ ಆರೋಗ್ಯ ಪರೀಕ್ಷೆ ಸೇವೆಗಳನ್ನು ಕಲ್ಪಿಸಲಾಯಿತು. ಈ ಬಾರಿಯ ದನಗಳ ಜಾತ್ರೆಗೆ ಸುಂಕ ವಿನಾಯಿತಿ ನೀಡಿರುವುದು ರೈತರಿಗೆ ಪ್ರೋತ್ಸಾಹವಾಗಿದೆ.</p>.<p>ಜಾತ್ರೆ ಕೊನೆದಿನ ಉತ್ತಮ ರಾಸುಗಳಿಗೆ ಪ್ರಥಮ, ದ್ವೀತಿಯ, ತೃತೀಯ ಬಹುಮಾನಗಳನ್ನು ಮುಜರಾಯಿ ಇಲಾಖೆಯಿಂದ ನೀಡಲಾಗುವುದು. ಒಟ್ಟಿನಲ್ಲಿ ಈ ಬಾರಿಯ ವಿದುರಾಶ್ವತ್ಥ ದನಗಳ ಜಾತ್ರೆ ರೈತರಿಗೆ ಉತ್ಸಾಹ ನೀಡುವ ಹಾಗೂ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಮಹತ್ವದ ಜಾತ್ರೆಯಾಗಿತ್ತು.</p>.<div><blockquote>ದನಗಳ ಜಾತ್ರೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಜರಾಯಿ ಇಲಾಖೆ ಎಲ್ಲ ಸೂಕ್ತ ಕ್ರಮ ಕೈಗೊಂಡಿದೆ. ರೈತರು ಸಹ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.</blockquote><span class="attribution">ಪಿ.ಎ.ಮರಿರಾಜು, ಕಾರ್ಯನಿರ್ವಹಣಾಧಿಕಾರಿ, ವಿದುರಾಶ್ವತ್ಥ ನಾರಾಯಣಸ್ವಾಮಿ ದೇವಸ್ಥಾನ</span></div>.<p>ವಿದುರಾಶ್ವತ್ಥದಲ್ಲಿ ದಶಕಗಳ ಹಿಂದೆ ಇಂತಹ ಕಳೆಗಟ್ಟಿದ ದನಗಳ ಜಾತ್ರೆ ನಡೆಯುತ್ತಿತ್ತು. ನಂತರ ಜಾತ್ರೆ ಕಳೆಗುಂದಿತ್ತು. ಈಗ ಮತ್ತೆ ದೊಡ್ಡ ಮಟ್ಟದಲ್ಲಿ ರೈತರು ಪಾಲ್ಗೊಂಡಿದ್ದಾರೆ. ರೈತರಲ್ಲಿ ಸಂತಸ ಹೆಚ್ಚಿಸಿದೆ, ರಾಸುಗಳ ಮಾರಾಟ ಮತ್ತು ಖರೀದಿಗೆ ಬಹು ಆಯ್ಕೆಗಳಿವೆ.</p><p>ಸಿದ್ದಪ್ಪ, ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>