ಅಮೃತ ಮಹೋತ್ಸವದ ಧ್ವಜಗಳನ್ನು ಶಾಲೆ, ಸರ್ಕಾರಿ ಕಚೇರಿ, ಮನೆಗಳ ಮೇಲೆ ಉತ್ಸಾಹದಿಂದ ಹಾರಿಸಲಾಯಿತು. ಸ್ಥಳೀಯ ಸಂಸ್ಥೆಗಳು, ರಾಜಕೀಯ ಪಕ್ಷಗಳು ಸಂಘ, ಸಂಸ್ಥೆಗಳು ಪೈಪೋಟಿ ಮೇಲೆ ರಾಷ್ಟ್ರಧ್ವಜ ವಿತರಿಸಿದವು. ಆದರೆ, ಧ್ವಜ
ಹಾರಿಸಲು ತೋರಿದ ಉತ್ಸಾಹ ಮತ್ತು ಅಭಿಮಾನ ಧ್ವಜ ಇಳಿಸುವಾಗ ಕಾಣೆಯಾಗಿದೆ. ಬಹುತೇಕ ಕಡೆಗಳಲ್ಲಿ ಧ್ವಜ ಇಳಿಸುವಾಗ ಶಿಷ್ಟಾಚಾರ, ನಿಯಮ ಪಾಲಿಸುತ್ತಿಲ್ಲ. ರಾಷ್ಟ್ರಧ್ವಜವನ್ನು ಗೌರವಯುತವಾಗಿ ಇಳಿಸುವ ಶಿಷ್ಟಾಚಾರವನ್ನು ಜನರು
ಮರೆತಿದ್ದಾರೆ.