ಗೌರಿಬಿದನೂರು: ಟೊಮೆಟೊಗೆ ಹೆಚ್ಚಿನ ಬೆಲೆ ಇದೆ. ಜನ ಮತ್ತು ಜಾನುವಾರುಗಳಿಂದ ಬೆಳೆ ಹಾನಿ ಮಾಡುತ್ತವೆ ಎಂದು ತಾಲ್ಲೂಕಿನಚರಕಮಟ್ಟೇನಹಳ್ಳಿಯಲ್ಲಿ ತೋಟದ ಮಾಲೀಕರೊಬ್ಬರು ಟೊಮೆಟೊ ಹೊಲದ ಸುತ್ತ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದರು. ಆದರೆ,ಬುಧವಾರ ಸಂಜೆ ವಿದ್ಯುತ್ ಸ್ಪರ್ಶಿಸಿ ಯುವಕರೊಬ್ಬರು ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕನ ಕುಟುಂಬದವರು ತೋಟದ ಮಾಲೀಕನನ್ನು ಹತ್ಯೆ ಮಾಡಿದ್ದಾರೆ.