ದಿನಸಿ, ಮಾತ್ರೆ ವಿತರಣೆ: ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಯು ಸುಮಾರು ₹30 ಲಕ್ಷ ಮೌಲ್ಯದ ದಿನಸಿ ಸಾಮಗ್ರಿಗಳ ಕಿಟ್ಗಳನ್ನು ಹಲವು ರಾಜ್ಯಗಳ ಅರ್ಹ ಜನರಿಗೆ ನೀಡಿದೆ. ಸತ್ಯಸಾಯಿ ಲೋಕ ಸೇವಾ ಆರೋಗ್ಯ ಕೇಂದ್ರವು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಸುಮಾರು ₹30 ಲಕ್ಷ ಮೌಲ್ಯದಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆ ಮಾತ್ರೆಗಳನ್ನು 4,500 ಜನರಿಗೆ ಅವರವರ ಮನೆಗಳಿಗೇ ತಲುಪಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.