ದೊಡ್ಡಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಸಂಪ್ ಅನ್ನು ಶುಚಿಗೊಳಿಸಲು ಮೊದಲು ಖಯೂಂ ಇಳಿದಿದ್ದಾರೆ. ಉಸಿರುಗಟ್ಟಿ ಅವರು ಒದ್ದಾಡಲಾರಂಭಿಸಿದಾಗ ಕೂಡಲೇ ಕುಮಾರ್ ಮತ್ತು ವಸಂತ್ ಸಂಪ್ನ ಒಳಗೆ ಇಳಿದು ಖಯೂಂ ಅವರನ್ನು ಮೇಲೆತ್ತಿ ಪಾರುಮಾಡಿದ್ದಾರೆ. ಆದರೆ, ಅವರಿಬ್ಬರೂ ಸಂಪ್ ಒಳಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.