<p>ಶೃಂಗೇರಿ : ಪಟ್ಟಣದ ಶಾರದಾ ನಗರದಲ್ಲಿ ನ್ಯಾಯಾಲಯಕ್ಕೆ ಮೀಸಲಾದ ಜಾಗ ಒತ್ತುವರಿ ಮಾಡಿದ ಬಿಜೆಪಿ ಮುಖಂಡ ಶಿವಶಂಕರ್ ಅವರಿಗೆ ₹500 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಶಿವಶಂಕರ್ ವಿರುದ್ಧ 2020–21ರಲ್ಲಿ ಅಂದಿನ ತಹಶೀಲ್ದಾರ್ ಅಂಬುಜಾ ಅವರು ಭೂಕಬಳಿಕೆ ಆರೋಪದಲ್ಲಿ ದೂರು ದಾಖಲಿಸಿದ್ದರು.</p>.<p>ಶೃಂಗೇರಿ ಗ್ರಾಮಾಂತರ ಸರ್ವೆ ನಂಬರ್ 150ರಲ್ಲಿ 4 ಎಕರೆ 21 ಗುಂಟೆ ಹಾಗೂ 215ರಲ್ಲಿ 7 ಎಕರೆ 16 ಗುಂಟೆ ಜಾಗವನ್ನು ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ 1980ರಲ್ಲಿ ಮೀಸಲಿರಿಸಲಾಗಿತ್ತು. ಜಾಗವನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.</p>.<p>ಬಿ.ಶಿವಶಂಕರ್ ಅವರು ಸರ್ವೆ ನಂಬರ್ 234/03ರಲ್ಲಿ 3 ಗುಂಟೆ ಜಾಗವನ್ನು 2018-19ರಲ್ಲಿ ಖರೀದಿ ಮಾಡಿದ್ದರು. ಜಾಗದ ಪಕ್ಕದಲ್ಲಿ ಇರುವ ಸರ್ಕಾರಿ ಸರ್ವೆ ನಂಬರ್ 215ರಲ್ಲಿ ಸುಮಾರು 2 ಗುಂಟೆ ಜಾಗದಲ್ಲಿ ಜೆಸಿಬಿ ಬಳಸಿ ಮಣ್ಣು ತೆಗೆದು ಸಮಗೊಳಿಸಿದ್ದರು.</p>.<p>‘ತಗ್ಗು ಪ್ರದೇಶವಾದ ಕಾರಣ ಪಕ್ಕದಲ್ಲಿ ಇರುವ ಜೆಎಂಎಫ್ಸಿ ನ್ಯಾಯಾ ಲಯದ ನ್ಯಾಯಾಧೀಶರ ವಸತಿ ಗೃಹ, ತಾಲ್ಲೂಕು ಕಚೇರಿ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಭೂ ಕುಸಿತದಿಂದ ಹಾನಿಯಾಗುವ ಸ್ಥಿತಿ ಇದೆ’ ಎಂದು ತಹಶೀಲ್ದಾರ್ ದೂರು ದಾಖಲಿಸಿದ್ದರು.</p>.<p>ವಿಚಾರಣೆ ನಡೆಸಿದ ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ, ಆರೋಪಿಯು ಸರ್ಕಾರಕ್ಕೆ ₹500 ದಂಡ ಪಾವತಿಸಬೇಕು. ದಂಡ ಪಾವತಿಸದಿದ್ದರೆ ಎರಡು ತಿಂಗಳು ಸಾದಾ ಸಜೆ ಅನುಭವಿಸಬೇಕು ಎಂದು ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-126-2061826367</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶೃಂಗೇರಿ : ಪಟ್ಟಣದ ಶಾರದಾ ನಗರದಲ್ಲಿ ನ್ಯಾಯಾಲಯಕ್ಕೆ ಮೀಸಲಾದ ಜಾಗ ಒತ್ತುವರಿ ಮಾಡಿದ ಬಿಜೆಪಿ ಮುಖಂಡ ಶಿವಶಂಕರ್ ಅವರಿಗೆ ₹500 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಶಿವಶಂಕರ್ ವಿರುದ್ಧ 2020–21ರಲ್ಲಿ ಅಂದಿನ ತಹಶೀಲ್ದಾರ್ ಅಂಬುಜಾ ಅವರು ಭೂಕಬಳಿಕೆ ಆರೋಪದಲ್ಲಿ ದೂರು ದಾಖಲಿಸಿದ್ದರು.</p>.<p>ಶೃಂಗೇರಿ ಗ್ರಾಮಾಂತರ ಸರ್ವೆ ನಂಬರ್ 150ರಲ್ಲಿ 4 ಎಕರೆ 21 ಗುಂಟೆ ಹಾಗೂ 215ರಲ್ಲಿ 7 ಎಕರೆ 16 ಗುಂಟೆ ಜಾಗವನ್ನು ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ 1980ರಲ್ಲಿ ಮೀಸಲಿರಿಸಲಾಗಿತ್ತು. ಜಾಗವನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.</p>.<p>ಬಿ.ಶಿವಶಂಕರ್ ಅವರು ಸರ್ವೆ ನಂಬರ್ 234/03ರಲ್ಲಿ 3 ಗುಂಟೆ ಜಾಗವನ್ನು 2018-19ರಲ್ಲಿ ಖರೀದಿ ಮಾಡಿದ್ದರು. ಜಾಗದ ಪಕ್ಕದಲ್ಲಿ ಇರುವ ಸರ್ಕಾರಿ ಸರ್ವೆ ನಂಬರ್ 215ರಲ್ಲಿ ಸುಮಾರು 2 ಗುಂಟೆ ಜಾಗದಲ್ಲಿ ಜೆಸಿಬಿ ಬಳಸಿ ಮಣ್ಣು ತೆಗೆದು ಸಮಗೊಳಿಸಿದ್ದರು.</p>.<p>‘ತಗ್ಗು ಪ್ರದೇಶವಾದ ಕಾರಣ ಪಕ್ಕದಲ್ಲಿ ಇರುವ ಜೆಎಂಎಫ್ಸಿ ನ್ಯಾಯಾ ಲಯದ ನ್ಯಾಯಾಧೀಶರ ವಸತಿ ಗೃಹ, ತಾಲ್ಲೂಕು ಕಚೇರಿ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಭೂ ಕುಸಿತದಿಂದ ಹಾನಿಯಾಗುವ ಸ್ಥಿತಿ ಇದೆ’ ಎಂದು ತಹಶೀಲ್ದಾರ್ ದೂರು ದಾಖಲಿಸಿದ್ದರು.</p>.<p>ವಿಚಾರಣೆ ನಡೆಸಿದ ಇಲ್ಲಿನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ, ಆರೋಪಿಯು ಸರ್ಕಾರಕ್ಕೆ ₹500 ದಂಡ ಪಾವತಿಸಬೇಕು. ದಂಡ ಪಾವತಿಸದಿದ್ದರೆ ಎರಡು ತಿಂಗಳು ಸಾದಾ ಸಜೆ ಅನುಭವಿಸಬೇಕು ಎಂದು ತಿಳಿಸಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-126-2061826367</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>