ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಸ್ಕೈ ರನ್ನರ್ಸ್‌’ ತಂಡ ಚಾಂಪಿಯನ್‌

ಅಡ್ವೆಂಚರ್‌ ರೇಸಿಂಗ್‌ ಸ್ಪರ್ಧೆ: ‘ವೀರ ಕನ್ನಡಿಗರು’ ತಂಡಕ್ಕೆ ದ್ವಿತೀಯ ಸ್ಥಾನ
Last Updated 3 ಜುಲೈ 2022, 16:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಡ್ವೆಂಚರ್‌ ರೇಸಿಂಗ್‌ ಸ್ಪರ್ಧೆಯಲ್ಲಿ ‘ದಿ ಸ್ಕೈ ರನ್ನರ್ಸ್‌’ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ಷಿಪ್‌ ಮುಡಿಗೇರಿಸಿಕೊಂಡಿದೆ.

ಪ್ರವಾಸೋದ್ಯಮ ಇಲಾಖೆ, ಚಿಕ್ಕಮಗಳೂರು ರೆಸಾರ್ಟ್ ಅಸೋಸಿಯೇಷನ್, ಎನ್ತ್‌ ಅಡ್ವೆಂಚರ್ ವತಿಯಿಂದ ಆಯೋಜಿಸಿದ್ದ ಅಡ್ವೆಂಚರ್ ರೇಸ್ ಚಾಂಪಿಯನ್‌ಷಿಪ್ ಇಂಡಿಯಾದ ಸಮಾರೋಪ ಸಮಾರಂಭದಲ್ಲಿ ತಂಡಗಳಿಗೆ ಪದಕ ನೀಡಲಾಯಿತು.

‘ದ ಸ್ಕೈ ರನ್ನರ್ಸ್‌’ ತಂಡ ಪ್ರಥಮ ಹಾಗೂ ‘ವೀರ ಕನ್ನಡಿಗರು’ ತಂಡ ದ್ವಿತೀಯ ಸ್ಥಾನ ಪಡೆದಿವೆ. 70 ಕಿ.ಮೀ
ಓಟ ವಿಭಾಗದಲ್ಲಿ ‘ಟೀಂ ಸ್ಟೇರ್ಸ್‌’ ತಂಡ ಪ್ರಥಮ ಹಾಗೂ ‘ಲಾಸ್ಟ್‌ ಮೈಲ್‌ರನ್ನರ್ಸ್‌’ ತಂಡ ದ್ವಿತೀಯ ಸ್ಥಾನ ಪಡೆದು
ಕೊಂಡಿವೆ. ಎನ್‌ ಅಡ್ವೆಂಚರ್‌ ಸಂಸ್ಥೆಯ ಅಜಿತಾ ಮದನ್‌, ಸಾಯಿಶ್‌ ಕಿರಾಣಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಜಿ.ಸಿ.ಸುಧೀರ್‌, ರೆಸಾರ್ಟ್‌ ಅಸೋಷಿಯೇಷನ್‌ನ ಮಂಜುನಾಥ್‌, ಚೇತನ್‌, ಭದ್ರಾ ಹುಲಿ ಸಂರಕ್ಷಿತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಪ್ರವಾಸೋದ್ಯಮ ಇಲಾಖೆಯ ಜಿ.ನಾಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT