ಕೃಷಿಯಲ್ಲಿ ನೈಜ ಆಸಕ್ತಿಯಿದ್ದರೆ ಯಶಸ್ಸು ಗಳಿಸಬಹುದು. ಆದರೆ, ಏಕ ಬೆಳೆಗೆ ಜೋತು ಬೀಳುವುದಕ್ಕಿಂತ ಮಿಶ್ರಬೆಳೆ ಪದ್ಧತಿಯಲ್ಲಿ ಹೆಚ್ಚಿನ ಲಾಭವಿದೆ. ಕೃಷಿಯೆಡೆಗಿನ ಪ್ರೀತಿಯ ಜೊತೆ ಬದ್ಧತೆ, ಅಧ್ಯಯನ ಹಾಗೂ ಪ್ರಯೋಗಶೀಲತೆ ಯಶಸ್ಸಿಗೆ ರಹದಾರಿ ಎನ್ನುವ ಸ್ವಾಮಿ, ಕೃಷಿಯಲ್ಲಿ ಲಾಭವಿಲ್ಲ ಎನ್ನುವವರಿಗೆ ಮಾದರಿಯಾಗಿದ್ದಾರೆ.