ಕಡೂರು: ಕೊರೊನಾ ತಲ್ಲಣವು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಒಂದೆಡೆ ಈಗಾಗಲೇ ಬೆಳೆದ ಅಲ್ಪಾವಧಿ ತರಕಾರಿ ಬೆಳೆ ಕೊಯ್ಲು ಮಾಡಲು ಕಾರ್ಮಿಕರ ಕೊರತೆ, ಕೊಯ್ಲು ಮಾಡಿದರೂ ಸಾಗಾಣಿಕೆಯ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ. ಮುಂಗಾರು ಆರಂಭಕ್ಕೆ ಮುನ್ನ ಹೊಲ ಉಳುಮೆಗೂ ತೊಂದರೆ... ಹೀಗೆ ತೊಂದರೆಗಳ ಸಾಲಿನಿಂದ ರೈತರು ಅಕ್ಷರಶಃ ಕಂಗೆಟ್ಟಿದ್ದು, ಕೃಷಿ ಚಟುವಟಿಕೆ ತೀವ್ರ ಕುಂಠಿತವಾಗಿದೆ.