‘ಬಡಾವಣೆಯಲ್ಲಿ ಬಡವರೇ ಹೆಚ್ಚಾಗಿದ್ದೇವೆ. ಅಧಿಕ ಮಂದಿ ಕೂಲಿಕಾರ್ಮಿಕರು. ಗರ್ಭಿಣಿಯರು, ಬಾಣಂತಿಯರು, ಚಿಕ್ಕ ಮಕ್ಕಳಿದ್ದಾರೆ. ಮನೆಯಂಗಳದಲ್ಲಿ ನಿಂತ ಮಳೆ ನೀರು, ಶೀತಾಂಶ ಹೆಚ್ಚಿಸಿದ್ದೂ ಅಲ್ಲದೆ ಸೊಳ್ಳೆ ಹಾವಳಿಯನ್ನು ಅಧಿಕಗೊಳಿಸಿದೆ. ಈ ಅಹಿತ ವಾತಾವರಣ, ಕೆಲವರನ್ನು ಕಾಯಿಲೆಯಿಂದ ನರಳುವಂತೆ ಮಾಡಿದೆ’ ಎಂದು ದೇವರಾಜ ಅರಸು ವಿಚಾರ ವೇದಿಕೆ ಮುಖಂಡ ಚಿಕ್ಕಾನವಂಗಲ ಬಸವರಾಜು ವಿವರಿಸುತ್ತಾರೆ.