ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳುಮೆಣಸು ಕಳವು: ನಾಲ್ವರು ಆರೋಪಿಗಳ ಬಂಧನ

Last Updated 13 ಏಪ್ರಿಲ್ 2022, 3:44 IST
ಅಕ್ಷರ ಗಾತ್ರ

ಆಲ್ದೂರು: ಇಲ್ಲಿನ ಸಮೀಪವಿರುವ ಹಾಂದಿಯ ಬಾಳೆಹಳ್ಳಿ ಭಾಗೀರಥಿ ಎಸ್ಟೇಟ್‌ನಲ್ಲಿ ಕಟಾವು ಮಾಡಿ ಕಣದಲ್ಲಿ ಒಣಗಲು ಹರಡಿದ್ದ ಕಾಳುಮೆಣಸು ಸೋಮವಾರ ರಾತ್ರಿ ಕಳವಾಗಿದೆ. ಈ ಸಂಬಂಧ ಎಸ್ಟೇಟ್ ಮಾಲೀಕ ಗಣೇಶ್ ಅಲಿಯಾಸ ರತನ್ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸರ್ಕಲ್ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವರುದ್ರಮ್ಮ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿ, ಮಿಂಚಿನ ಕಾರ್ಯಾಚರಣೆ ನಡೆಸಿ 4 ಆರೋಪಿಗಳನ್ನು ಬಂಧಿಸಲಾಗಿದೆ. ಹೊಸಪೇಟೆ ಗ್ರಾಮದ ನಿಜಲಿಂಗಪ್ಪ ಅಲಿಯಾಸ್ ತಮ್ಮಣ್ಣಿ, ವೆಂಕಟೇಶ್, ಸುನಿಲ್, ಅಭಿ ಬಂಧಿತರು.

ಆರೋಪಿಗಳಿಂದ ₹ 1.50 ಲಕ್ಷ ಮೌಲ್ಯದ 2.38 ಕ್ವಿಂಟಲ್ ಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದ ಸಿಬ್ಬಂದಿ ಚಂದ್ರಪ್ಪ, ಆನಂದ್, ಶಶಿಧರ್, ಸಂದೀಪ್ ಅವರನ್ನು ಇನ್‌ಸ್ಪೆಕ್ಟರ್‌ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT