<p><strong>ಆಲ್ದೂರು:</strong> 1944ರಲ್ಲಿ ನಿರ್ಮಾಣವಾಗಿ, 82 ವರ್ಷಗಳನ್ನು ಪೂರೈಸಿರುವ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ವಿದ್ಯಾ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಹರ್ಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸಿಎಸ್ಆರ್ ನಿಧಿಯಿಂದ ಮರುನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಸಂತದ ಮೂಡಿಸಿದೆ.</p>.<p>ಉತ್ತಮ ಗುಣಮಟ್ಟ ಹಾಗೂ ಸಕಲ ಸೌಕರ್ಯವುಳ್ಳ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು ಎಂಬ ಜನರ ಬೇಡಿಕೆಗೆ ಸಂಸ್ಥೆ ಸ್ಪಂದಿಸಿದೆ. ಈಗಾಗಲೇ ಹಳೆಯ ಕಟ್ಟಡವನ್ನು ನೆಲಸಮ ಮಾಡಿದೆ. ನೀರಿನ ಸೌಲಭ್ಯಕ್ಕಾಗಿ ಆಸ್ಪತ್ರೆ ಮುಂಭಾಗ ಕೊಳವೆಬಾವಿ ಕೊರೆಯಿಸಿದ್ದು, 2 ಇಂಚು ನೀರು ದೊರೆತಿದೆ. ಆರೋಗ್ಯ ಕೇಂದ್ರದ ಸಮಗ್ರ ಅಭಿವೃದ್ಧಿ, ಗುಣಮಟ್ಟ, ಸುಸಜ್ಜಿತ ವ್ಯವಸ್ಥೆ ಒದಗಿಸಲು ಸಂಸ್ಥೆ ಸಜ್ಜಾಗಿದೆ.</p>.<p>100 ಚದರ ಅಡಿ ವಿಸ್ತೀರ್ಣದ, ಸುಮಾರು ₹3ರಿಂದ ₹5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಕಟ್ಟಡದಲ್ಲಿ ನೆಲ ಅಂತಸ್ತು, ಒಂದನೇ ಮಹಡಿ, ಹೊರರೋಗಿ ಚಿಕಿತ್ಸಾ ಘಟಕ ಹಾಗೂ ಮೈನರ್ ಒಟಿ ಇರಲಿದೆ. 30 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣವಾಗಲಿದೆ. ಆಸ್ಪತ್ರೆಗೆ ಸಿಬ್ಬಂದಿ ವರ್ಗವನ್ನು ಸಂಸ್ಥೆ ವತಿಯಿಂದ ಒದಗಿಸುವ ಭರವಸೆ ನೀಡಲಾಗಿದೆ.</p>.<p>ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಇದೇ 30ರಂದು ನಡೆಯಲಿದ್ದು, ವಿದ್ಯಾ ಕಾಫಿ ಸಂಸ್ಥೆಯ ಮುಖ್ಯಸ್ಥ ಕೆ. ಶ್ಯಾಮ್ ಪ್ರಸಾದ್, ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಭಾಗವಹಿಸುವರು.</p>.<p>ವಿದ್ಯಾ ಕಾಫಿ ಸಂಸ್ಥೆ ಹಿರೇಮಗಳೂರಿನಲ್ಲಿ ಉತ್ತಮ ದರ್ಜೆಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಿದೆ. ನಗರದಲ್ಲಿ ವಿಜಯಪುರದಲ್ಲಿರುವ ಹಳೆಯ ತಾಲ್ಲೂಕು ಪಂಚಾಯಿತಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಸಂಕಲ್ಪ ಮಾಡಿದೆ. ಆಲ್ದೂರು ಆರೋಗ್ಯ ಕೇಂದ್ರ ಕಟ್ಟಡವನ್ನು 8ರಿಂದ 10 ತಿಂಗಳಿನಲ್ಲಿ ಪೂರ್ತಿಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಚಿಕ್ಕಮಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ಥ್ ಬಾಬು ತಿಳಿಸಿದರು.</p>.<p>ವಿದ್ಯಾ ಕಾಫಿ ಸಂಸ್ಥೆಯು ಹಿರೇಮಗಳೂರಿನಲ್ಲಿ ದಶಕಗಳ ಹಿಂದೆ ಅಭಿವೃದ್ಧಿಪಡಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಿಗೂ ಗುಣಮಟ್ಟದಿಂದ ಮನೆ ಮಾತಾಗಿದೆ. ಸುಸಜ್ಜಿತ ಮೂಲಸೌಕರ್ಯ, ಒಳರೋಗಿಗಳಿಗೆ ಉಚಿತವಾಗಿ ಬೆಳಿಗ್ಗೆ, ಮಧ್ಯಾಹ್ನ ಉಪಹಾರ ಒದಗಿಸುತ್ತಿರುವುದು ಗಮನಾರ್ಹ ವಿಷಯವಾಗಿದೆ.</p>.<p><strong>‘ಶ್ರದ್ಧಾ ಭಕ್ತಿಯಿಂದ ನಿರ್ಮಾಣ’</strong></p><p>ಸಾರ್ವಜನಿಕರಿಂದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಬಂದ ಹಿನ್ನೆಲೆ ಈಚೆಗೆ ಆಲ್ದೂರು ಆರೋಗ್ಯ ಕೇಂದ್ರ ಕಟ್ಟಡದ ನೆಲಸಮ ಆರಂಭವಾದ ಮರುದಿನ ಭೇಟಿ ನೀಡಿದಾಗ ಎಲ್ಲರ ಬೆಂಬಲ ಇರುವುದನ್ನು ಕಂಡು ಸಂತೋಷವಾಯಿತು. ದೇವಸ್ಥಾನವನ್ನು ನಿರ್ಮಾಣ ಮಾಡುವಾಗ ಶ್ರದ್ಧಾ ಭಕ್ತಿಯಿಂದ ನಿರ್ಮಿಸುತ್ತೇವೆಯೋ ಅದೇ ರೀತಿ ಆಲ್ದೂರು ಆರೋಗ್ಯ ಕೇಂದ್ರ ಕಟ್ಟಡವನ್ನು ಶ್ರದ್ಧೆಯಿಂದ ನಮ್ಮ ಸಂಸ್ಥೆಯ ತಂಡ ನಿರ್ಮಿಸುತ್ತದೆ. ಈ ಬಗ್ಗೆ ನಮ್ಮ ಸಂಸ್ಥೆಯ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ವಿದ್ಯಾ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಹರ್ಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಶ್ಯಾಮ್ ಪ್ರಸಾದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲ್ದೂರು:</strong> 1944ರಲ್ಲಿ ನಿರ್ಮಾಣವಾಗಿ, 82 ವರ್ಷಗಳನ್ನು ಪೂರೈಸಿರುವ ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ವಿದ್ಯಾ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಹರ್ಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸಿಎಸ್ಆರ್ ನಿಧಿಯಿಂದ ಮರುನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಸಂತದ ಮೂಡಿಸಿದೆ.</p>.<p>ಉತ್ತಮ ಗುಣಮಟ್ಟ ಹಾಗೂ ಸಕಲ ಸೌಕರ್ಯವುಳ್ಳ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು ಎಂಬ ಜನರ ಬೇಡಿಕೆಗೆ ಸಂಸ್ಥೆ ಸ್ಪಂದಿಸಿದೆ. ಈಗಾಗಲೇ ಹಳೆಯ ಕಟ್ಟಡವನ್ನು ನೆಲಸಮ ಮಾಡಿದೆ. ನೀರಿನ ಸೌಲಭ್ಯಕ್ಕಾಗಿ ಆಸ್ಪತ್ರೆ ಮುಂಭಾಗ ಕೊಳವೆಬಾವಿ ಕೊರೆಯಿಸಿದ್ದು, 2 ಇಂಚು ನೀರು ದೊರೆತಿದೆ. ಆರೋಗ್ಯ ಕೇಂದ್ರದ ಸಮಗ್ರ ಅಭಿವೃದ್ಧಿ, ಗುಣಮಟ್ಟ, ಸುಸಜ್ಜಿತ ವ್ಯವಸ್ಥೆ ಒದಗಿಸಲು ಸಂಸ್ಥೆ ಸಜ್ಜಾಗಿದೆ.</p>.<p>100 ಚದರ ಅಡಿ ವಿಸ್ತೀರ್ಣದ, ಸುಮಾರು ₹3ರಿಂದ ₹5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಕಟ್ಟಡದಲ್ಲಿ ನೆಲ ಅಂತಸ್ತು, ಒಂದನೇ ಮಹಡಿ, ಹೊರರೋಗಿ ಚಿಕಿತ್ಸಾ ಘಟಕ ಹಾಗೂ ಮೈನರ್ ಒಟಿ ಇರಲಿದೆ. 30 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣವಾಗಲಿದೆ. ಆಸ್ಪತ್ರೆಗೆ ಸಿಬ್ಬಂದಿ ವರ್ಗವನ್ನು ಸಂಸ್ಥೆ ವತಿಯಿಂದ ಒದಗಿಸುವ ಭರವಸೆ ನೀಡಲಾಗಿದೆ.</p>.<p>ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಇದೇ 30ರಂದು ನಡೆಯಲಿದ್ದು, ವಿದ್ಯಾ ಕಾಫಿ ಸಂಸ್ಥೆಯ ಮುಖ್ಯಸ್ಥ ಕೆ. ಶ್ಯಾಮ್ ಪ್ರಸಾದ್, ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಭಾಗವಹಿಸುವರು.</p>.<p>ವಿದ್ಯಾ ಕಾಫಿ ಸಂಸ್ಥೆ ಹಿರೇಮಗಳೂರಿನಲ್ಲಿ ಉತ್ತಮ ದರ್ಜೆಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಿದೆ. ನಗರದಲ್ಲಿ ವಿಜಯಪುರದಲ್ಲಿರುವ ಹಳೆಯ ತಾಲ್ಲೂಕು ಪಂಚಾಯಿತಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಸಂಕಲ್ಪ ಮಾಡಿದೆ. ಆಲ್ದೂರು ಆರೋಗ್ಯ ಕೇಂದ್ರ ಕಟ್ಟಡವನ್ನು 8ರಿಂದ 10 ತಿಂಗಳಿನಲ್ಲಿ ಪೂರ್ತಿಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಚಿಕ್ಕಮಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ಥ್ ಬಾಬು ತಿಳಿಸಿದರು.</p>.<p>ವಿದ್ಯಾ ಕಾಫಿ ಸಂಸ್ಥೆಯು ಹಿರೇಮಗಳೂರಿನಲ್ಲಿ ದಶಕಗಳ ಹಿಂದೆ ಅಭಿವೃದ್ಧಿಪಡಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಿಗೂ ಗುಣಮಟ್ಟದಿಂದ ಮನೆ ಮಾತಾಗಿದೆ. ಸುಸಜ್ಜಿತ ಮೂಲಸೌಕರ್ಯ, ಒಳರೋಗಿಗಳಿಗೆ ಉಚಿತವಾಗಿ ಬೆಳಿಗ್ಗೆ, ಮಧ್ಯಾಹ್ನ ಉಪಹಾರ ಒದಗಿಸುತ್ತಿರುವುದು ಗಮನಾರ್ಹ ವಿಷಯವಾಗಿದೆ.</p>.<p><strong>‘ಶ್ರದ್ಧಾ ಭಕ್ತಿಯಿಂದ ನಿರ್ಮಾಣ’</strong></p><p>ಸಾರ್ವಜನಿಕರಿಂದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಬಂದ ಹಿನ್ನೆಲೆ ಈಚೆಗೆ ಆಲ್ದೂರು ಆರೋಗ್ಯ ಕೇಂದ್ರ ಕಟ್ಟಡದ ನೆಲಸಮ ಆರಂಭವಾದ ಮರುದಿನ ಭೇಟಿ ನೀಡಿದಾಗ ಎಲ್ಲರ ಬೆಂಬಲ ಇರುವುದನ್ನು ಕಂಡು ಸಂತೋಷವಾಯಿತು. ದೇವಸ್ಥಾನವನ್ನು ನಿರ್ಮಾಣ ಮಾಡುವಾಗ ಶ್ರದ್ಧಾ ಭಕ್ತಿಯಿಂದ ನಿರ್ಮಿಸುತ್ತೇವೆಯೋ ಅದೇ ರೀತಿ ಆಲ್ದೂರು ಆರೋಗ್ಯ ಕೇಂದ್ರ ಕಟ್ಟಡವನ್ನು ಶ್ರದ್ಧೆಯಿಂದ ನಮ್ಮ ಸಂಸ್ಥೆಯ ತಂಡ ನಿರ್ಮಿಸುತ್ತದೆ. ಈ ಬಗ್ಗೆ ನಮ್ಮ ಸಂಸ್ಥೆಯ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ವಿದ್ಯಾ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಹರ್ಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಶ್ಯಾಮ್ ಪ್ರಸಾದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>