<p><strong>ಆಲ್ದೂರು:</strong> ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ಬಾಳೆಹೊನ್ನೂರಿನ ಸುಭದ್ರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಘದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು.</p>.<p>ಸಂಘದ ನಿಕಟಪೂರ್ವ ಅಧ್ಯಕ್ಷ ದೇವಯ್ಯ ಬಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ‘ಬೆರಳೆಣಿಕೆಯಷ್ಟು ಸದಸ್ಯರು ಹಾಗೂ ನಿರ್ದೇಶಕರೊಂದಿಗೆ ಆರಂಭವಾದ ಸಹಕಾರಿ ಸಂಘ ಇಂದು ಉತ್ತಮ ನೆಲೆಯಲ್ಲಿ ಸಾಗುತ್ತಿದೆ. 9 ವರ್ಷಗಳಿಂದ ಗ್ರಾಹಕರ ವಿಶ್ವಾಸ, ಉತ್ತಮ ಸೇವೆ, ಸದೃಢ ಆರ್ಥಿಕ ಸ್ಥಿತಿ ಹಾಗೂ ಆಕರ್ಷಕ ಠೇವಣಿ ಯೋಜನೆಗಳ ಮೂಲಕ ಸಂಘ ಬೆಳವಣಿಗೆ ಕಂಡಿದೆ. ಉತ್ತಮ ಠೇವಣಿದಾರರು ಹಾಗೂ ಉತ್ತಮ ಗ್ರಾಹಕರಿಗೆ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಕಾಫಿ ಬೆಳೆಗಾರ ಸಿ. ಸುರೇಶ್, ‘ಸಂಘದ ವತಿಯಿಂದ ಸಾಧ್ಯವಾದಷ್ಟು ಸಣ್ಣ ಉದ್ಯಮಿಗಳು ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಇಂಥವರಿಗೆ ನೆರವು ನೀಡಿದರೆ ಮರುಪಾವತಿಯೊಂದಿಗೆ ಸಂಘವೂ ಉತ್ತಮ ಬೆಳವಣಿಗೆ ಕಾಣಲಿದೆ’ ಎಂದರು.</p>.<p>ಸೌಹಾರ್ದ ಅಭಿವೃದ್ಧಿ ಅಧಿಕಾರಿ ಅಶೋಕ್ ಜಿ. ಮಾತನಾಡಿ, ಸಹಕಾರ ಸಂಘಗಳ ಕಾಯ್ದೆಗಳು, ಕಾನೂನುಗಳು, ಸಂಘದ ವಿವಿಧ ವಿಭಾಗಗಳು, ಶಾಖೆಗಳ ಕಾರ್ಯವೈಖರಿ ಹಾಗೂ ಲಾಭದೊಂದಿಗೆ ಅಭಿವೃದ್ಧಿಯ ಮಾಹಿತಿ ಹಂಚಿಕೊಂಡರು.</p>.<p>ವೃತ್ತ ನಿರೀಕ್ಷಕ ಪಿ.ಪಿ. ಸೋಮೇಗೌಡ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಅಧ್ಯಕ್ಷ ಮೋಹನದಾಸ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಎಚ್.ಸಿ., ಬಿಜೆಪಿ ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-126-1772767306</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲ್ದೂರು:</strong> ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ಬಾಳೆಹೊನ್ನೂರಿನ ಸುಭದ್ರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಘದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು.</p>.<p>ಸಂಘದ ನಿಕಟಪೂರ್ವ ಅಧ್ಯಕ್ಷ ದೇವಯ್ಯ ಬಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ‘ಬೆರಳೆಣಿಕೆಯಷ್ಟು ಸದಸ್ಯರು ಹಾಗೂ ನಿರ್ದೇಶಕರೊಂದಿಗೆ ಆರಂಭವಾದ ಸಹಕಾರಿ ಸಂಘ ಇಂದು ಉತ್ತಮ ನೆಲೆಯಲ್ಲಿ ಸಾಗುತ್ತಿದೆ. 9 ವರ್ಷಗಳಿಂದ ಗ್ರಾಹಕರ ವಿಶ್ವಾಸ, ಉತ್ತಮ ಸೇವೆ, ಸದೃಢ ಆರ್ಥಿಕ ಸ್ಥಿತಿ ಹಾಗೂ ಆಕರ್ಷಕ ಠೇವಣಿ ಯೋಜನೆಗಳ ಮೂಲಕ ಸಂಘ ಬೆಳವಣಿಗೆ ಕಂಡಿದೆ. ಉತ್ತಮ ಠೇವಣಿದಾರರು ಹಾಗೂ ಉತ್ತಮ ಗ್ರಾಹಕರಿಗೆ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಕಾಫಿ ಬೆಳೆಗಾರ ಸಿ. ಸುರೇಶ್, ‘ಸಂಘದ ವತಿಯಿಂದ ಸಾಧ್ಯವಾದಷ್ಟು ಸಣ್ಣ ಉದ್ಯಮಿಗಳು ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಇಂಥವರಿಗೆ ನೆರವು ನೀಡಿದರೆ ಮರುಪಾವತಿಯೊಂದಿಗೆ ಸಂಘವೂ ಉತ್ತಮ ಬೆಳವಣಿಗೆ ಕಾಣಲಿದೆ’ ಎಂದರು.</p>.<p>ಸೌಹಾರ್ದ ಅಭಿವೃದ್ಧಿ ಅಧಿಕಾರಿ ಅಶೋಕ್ ಜಿ. ಮಾತನಾಡಿ, ಸಹಕಾರ ಸಂಘಗಳ ಕಾಯ್ದೆಗಳು, ಕಾನೂನುಗಳು, ಸಂಘದ ವಿವಿಧ ವಿಭಾಗಗಳು, ಶಾಖೆಗಳ ಕಾರ್ಯವೈಖರಿ ಹಾಗೂ ಲಾಭದೊಂದಿಗೆ ಅಭಿವೃದ್ಧಿಯ ಮಾಹಿತಿ ಹಂಚಿಕೊಂಡರು.</p>.<p>ವೃತ್ತ ನಿರೀಕ್ಷಕ ಪಿ.ಪಿ. ಸೋಮೇಗೌಡ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಅಧ್ಯಕ್ಷ ಮೋಹನದಾಸ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಎಚ್.ಸಿ., ಬಿಜೆಪಿ ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-126-1772767306</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>