ಕಳೆದ ಬೇಸಿಗೆ ವೇಳೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಪಹಣಿ ಪಡೆಯಲು ಜನರು ಬಿಸಿಲಿನಲ್ಲಿ ಸಾಲುಗಟ್ಟಿ ನಿಂತಿರುವುದನ್ನು ‘ಪ್ರಜಾವಾಣಿ’ ವರದಿ ಪ್ರಕಟಸಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಎರ್ರಿಸ್ವಾಮಿ ಅವರು ಶೀಟ್ ಮಾಡನ್ನು ನಿರ್ಮಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಂತರ ತಾಲ್ಲೂಕು ಕಚೇರಿಯಲ್ಲಿ ಜನರಿಗೆ ಕುಡಿಯುವ ನೀರನ್ನು ಒದಗಿಸಿದ್ದರು. ಸಕಾಲ ಸೇವೆಯೊಂದಿಗೆ ಇದೀಗ ಭೂಮಿ ಯೋಜನೆಯಡಿಯಲ್ಲಿ ಕಾಲಮಿತಿಯಲ್ಲಿ ಸೇವೆ ಒದಗಿಸಿರುವುದಕ್ಕೆ ತಾಲ್ಲೂಕಿನ ನಾಗರಿಕರು ತಹಶೀಲ್ದಾರ್ ಎರ್ರಿಸ್ವಾಮಿ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.