‘ರಾಮದಂಡು’
ಹೈದರಾಬಾದ್, ಮಾ. 7– ರಾಜ್ಯದಲ್ಲಿನ ಕೇಂದ್ರಾಡಳಿತದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡದಿದ್ದ ಪಕ್ಷದಲ್ಲಿ ಶಿವಸೇನಾ ಮತ್ತು ಇತರ ಸೇನೆಗಳ ಮಾದರಿಯಲ್ಲಿ ‘ರಾಮದಂಡು’ ರಚಿಸಬೇಕಾಗುವುದೆಂದು ರಿಪಬ್ಲಿಕನ್ ಪಕ್ಷದ ನಾಯಕಿ ಶ್ರೀಮತಿ ಜೆ. ಈಶ್ವರಿಬಾಯ್ ಅವರು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.