<p><strong>ಚಿಕ್ಕಮಗಳೂರು:</strong> ಬಾಬಾಬುಡನ್ಗಿರಿ ವಿಷಯದಲ್ಲಿ ಜಾತ್ಯಾತೀತ ತತ್ವಕ್ಕೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿ ಮಾ.5ರಂದು(ಗುರುವಾರ) ಪ್ರತಿಭಟನೆ ನಡೆಸಲು ಎದ್ದೇಳು ಕರ್ನಾಟಕ ಸಂಘಟನೆ ತೀರ್ಮಾನಿಸಿದೆ.</p><p>‘ಬಾಬಾಬುಡನ್ಗಿರಿ ವಿಷಯದಲ್ಲಿ ಮಾದುಸ್ವಾಮಿ ವರದಿಯನ್ನಾಗಲಿ, ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನಾಗಲಿ ಪಾಲನೆ ಮಾಡುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಜಿಲ್ಲಾಧಿಕಾರಿ ಅವರನ್ನು ಕೇಳಿದರೆ ಯಾವುದೇ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ’ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಕೆ.ಎಲ್.ಅಶೋಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p><p>‘ಸೂಫಿ ತತ್ವ ಎಂದರೆ ಏನು ಎಂಬುದೇ ಸರ್ಕಾರಕ್ಕಾಗಲೀ, ಜಿಲ್ಲಾಡಳಿತಕ್ಕಾಗಲಿ ಅರ್ಥವಾಗಿಲ್ಲ. ದತ್ತ ಜಂತಿಯ ದಿನ ಎಲ್ಲವನ್ನೂ ಕೇಸರೀಕರಣ ಮಾಡಲಾಗುತ್ತದೆ. ಸೂಫಿಗಳ ಆಚರಣೆ ಬಂದಾಗ ಸಂಪೂರ್ಣ ನಿರ್ಲಕ್ಯ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಬಾಬಾಬುಡನ್ಗಿರಿ ವಿಷಯದಲ್ಲಿ ಜಾತ್ಯಾತೀತ ತತ್ವಕ್ಕೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿ ಮಾ.5ರಂದು(ಗುರುವಾರ) ಪ್ರತಿಭಟನೆ ನಡೆಸಲು ಎದ್ದೇಳು ಕರ್ನಾಟಕ ಸಂಘಟನೆ ತೀರ್ಮಾನಿಸಿದೆ.</p><p>‘ಬಾಬಾಬುಡನ್ಗಿರಿ ವಿಷಯದಲ್ಲಿ ಮಾದುಸ್ವಾಮಿ ವರದಿಯನ್ನಾಗಲಿ, ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನಾಗಲಿ ಪಾಲನೆ ಮಾಡುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಜಿಲ್ಲಾಧಿಕಾರಿ ಅವರನ್ನು ಕೇಳಿದರೆ ಯಾವುದೇ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ’ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಕೆ.ಎಲ್.ಅಶೋಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p><p>‘ಸೂಫಿ ತತ್ವ ಎಂದರೆ ಏನು ಎಂಬುದೇ ಸರ್ಕಾರಕ್ಕಾಗಲೀ, ಜಿಲ್ಲಾಡಳಿತಕ್ಕಾಗಲಿ ಅರ್ಥವಾಗಿಲ್ಲ. ದತ್ತ ಜಂತಿಯ ದಿನ ಎಲ್ಲವನ್ನೂ ಕೇಸರೀಕರಣ ಮಾಡಲಾಗುತ್ತದೆ. ಸೂಫಿಗಳ ಆಚರಣೆ ಬಂದಾಗ ಸಂಪೂರ್ಣ ನಿರ್ಲಕ್ಯ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>