ಜಲಾಶಯದ ಸಮೀಪ ನಿಂತಿದ್ದ ಕಾರಿನಲ್ಲಿ ‘ಡೆತ್ ನೋಟ್’ ಸಿಕ್ಕಿದೆ. ‘ನನ್ನ ಸಾವಿಗೆ ಬಗರ್ ಹುಕುಂ ಧನಪಾಲ್ ಸಂಪೂರ್ಣ ಕಾರಣರಾಗಿರುತ್ತಾರೆ. ಏಕೆಂದರೆ ಅವರೇ ಎಲ್ಲಾ ವಹಿಸಿಕೊಂಡು ನನ್ನ ಮೇಲೆ ಹೇಳುವುದು ಹಾಗೂ ಮಳಿಕೊಪ್ಪ ಸ್ಮಶಾನದ ಬಗ್ಗೆ ಒತ್ತಡ ಸುಖಾಸುಮ್ಮನೆ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ಕಾರಣಕರ್ತರು 1.ರಮೇಶಣ್ಣ ಬಟ್ಟೆ ಅಂಗಡಿ, 2.ಸಂಜೀವಕುಮಾರ್ ಸ್ಮಶಾನದ ಬಗ್ಗೆ ಒತ್ತ ಹಾಕಿದವರು. (ಸಹಿ), ಲಕ್ಕವಳ್ಳಿ ಹೋಬಳಿ ತರೀಕೆರೆ’ ಎಂದು ‘ಡೆತ್ನೋಟ್’ನಲ್ಲಿ ಬರೆಯಲಾಗಿದೆ.