ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಸೋಲಿಸಲು ಕಾಂಗ್ರೆಸ್ಗೆ ಪರೋಕ್ಷವಾಗಿ ಸಾಥ್ ನೀಡಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಭೋಜೇಗೌಡ ಅವರ ಮೇಲೆ ಹಾಲು ಸುರಿದು ಸಂತಸ ವ್ಯಕ್ತಪಡಿಸಿದರು.
ಹೊಸಮನೆ ಬಡಾವಣೆಯ ವೃತ್ತದ ಸಮೀಪ ಎ.ಸಿ. ಕುಮಾರಗೌಡ, ಗೋಪಿ, ಸಿ.ಕೆ. ಮೂರ್ತಿ ಮೊದಲಾದವರು ಭೋಜೇಗೌಡ ಅವರಿಗೆ ಹೂಮಾಲೆ ಹಾಕಿ, ಕ್ಷೀರಾಭಿಷೇಕ ಮಾಡಿದರು.
ಭೋಜೇಗೌಡ ಮಾತನಾಡಿ,‘ಕ್ಷೇತ್ರದಲ್ಲಿ 20 ವರ್ಷದ ಬಿಜೆಪಿ ಆಡಳಿತ ಕೊನೆಗೊಂಡಿದೆ. ಹೊಸ ಶಾಸಕರು ನಗರಸಭೆ, ಸರ್ಕಾರಿ ಕಚೇರಿಗಳಲ್ಲಿ ಲಂಚಕ್ಕೆ ಕಡಿವಾಣ ಹಾಕಬೇಕು. ಉತ್ತಮ ಆಡಳಿತ ನೀಡಬೇಕು’ ಎಂದು ಸಲಹೆ ನೀಡಿದರು.
ಪೂರ್ಣೇಶ್, ದೀಪು, ಎಚ್.ಎಸ್.ಮಂಜಪ್ಪ, ಆನಂದೇಗೌಡ, ಶಿವಕುಮಾರ್, ಶ್ರೀನಿವಾಸ್ ಇದ್ದರು.