<p><strong>ಬೀರೂರು (ಕಡೂರು):</strong> ಇಲ್ಲಿನ ವೀರಭದ್ರಸ್ವಾಮಿ, ಭದ್ರಕಾಳಿ ಅಮ್ಮನವರ ರಥೋತ್ಸವ ಅಂಗವಾಗಿ ಶಿವಾಜಿ ವ್ಯಾಯಾಮ ಶಾಲೆ, ಪುರಸಭೆ, ಸಾರ್ವಜನಿಕರ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಬಹಿರಂಗ ಕುಸ್ತಿ ಪಂದ್ಯದಲ್ಲಿ ಹರಿಯಾಣದ ಅಮಿತ್ ಕುಮಾರ್ ಅವರನ್ನು ಮಣಿಸಿದ ಮಹಾರಾಷ್ಟ್ರದ ಪ್ರಥಮೇಶ್ ಪಾಟೀಲ್ ಬೆಳ್ಳಿ ಗದೆ ಜಯಸಿದರು.</p>.<p>ಬೀರೂರಿನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಶುಕ್ರವಾರ ಶಿವಾಜಿ ವ್ಯಾಯಾಮ ಶಾಲೆಯ ಅಧ್ಯಕ್ಷ ಕುಮಾರಸ್ವಾಮಿ ಅಖಾಡದ ಪೂಜೆ ನೆರವೇರಿಸಿ ಸ್ಪರ್ಧೆಗೆ ಚಾಲನೆ ನೀಡಿದ್ದರು. ಶನಿವಾರ, ಭಾನುವಾರ ಪಂದ್ಯಗಳು ನಡೆದವು. ಹಾವೇರಿ, ದಾವಣಗೆರೆ, ಗದಗ, ಹುಬ್ಬಳ್ಳಿ, ಬೆಳಗಾವಿ, ತುಮಕೂರು, ಮೈಸೂರು, ಶಿವಮೊಗ್ಗ, ಶಿಕಾರಿಪುರ, ಧಾರವಾಡ, ಹೊರ ರಾಜ್ಯಗಳಾದ ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್ನ 150ಕ್ಕೂ ಅಧಿಕ ಕುಸ್ತಿ ಪಟುಗಳು ಭಾಗವಹಿಸಿದ್ದರು.</p>.<p>ಕೊನೆಯ ದಿನವಾದ ಭಾನುವಾರ ರಾತ್ರಿ ಪ್ರಥಮ ಬಹುಮಾನ ಬೆಳ್ಳಿಗದೆಗಾಗಿ ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ಕುಸ್ತಿಪಟುಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ತೀವ್ರ ಹಣಾಹಣಿಯಲ್ಲಿ ಇಬ್ಬರೂ ಪೈಲ್ವಾನರು ಸಮಬಲದ ಹೋರಾಟದಿಂದ ವಿವಿಧ ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು. </p>.<p>ವೀರಭದ್ರಸ್ವಾಮಿ ಪ್ರಶಸ್ತಿಗೆ ಕೊಲ್ಲಾಪುರದ ಚರಣ್, ಧಾರವಾಡದ ಶಿವಾನಂದ ಭಂಗಿ ನಡೆಸಿದ ಸೆಣಸಾಟ ರೋಚಕವಾಗಿತ್ತು. ಪೈಲ್ವಾನರು ಹಲವು ಬಾರಿ ಅಖಾಡದಿಂದ ಕೆಳಗಿಳಿದ್ದರಿಂದ ತೀರ್ಪುಗಾರರು ಸಮಯ, ಪಾಯಿಂಟ್ಗೆ ಆಡುವಂತೆ ಸೂಚಿಸಿದ್ದರು. ಶಿವಾನಂದರನ್ನು ಚಿತ್ ಮಾಡುವ ಮೂಲಕ ಕೊಲ್ಲಾಪುರದ ಚರಣ್ ಗೆಲುವು ಸಾಧಿಸಿದರು.</p>.<p>ಪಂದ್ಯಾವಳಿಯಲ್ಲಿ ಬೆಳ್ಳಿ ಲೋಟ, ನಗದು ಬಹುಮಾನ, ಪಾರಿತೋಷಕಗಳ ಕುಸ್ತಿ ನಡೆಸಲಾಯಿತು. ಮೈಲಾರಲಿಂಗೇಶ್ವರ ಪ್ರಶಸ್ತಿ, ಅಂಬಿಗರ ಚೌಡಯ್ಯ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಕಟ್ಟೆ ಕೋಡಿ ಅಂತರಘಟ್ಟಮ್ಮ ಪ್ರಶಸ್ತಿ, ಆಟೊ ಚಾಲಕರು ಮತ್ತು ಮಾಲೀಕರ ಪ್ರಶಸ್ತಿ, ಬಡಗಿ ಕಾರ್ಮಿಕರ ಪ್ರಶಸ್ತಿ, ಲಾರಿ ಚಾಲಕರ ಪ್ರಶಸ್ತಿ, ಅಂಜುಮಾನ್ ಪ್ರಶಸ್ತಿ, ನ್ಯಾಯಬೆಲೆ ಅಂಗಡಿ ಪ್ರಶಸ್ತಿ, ಮರಾಟ ಸಮಾಜ ಪ್ರಶಸ್ತಿ, ಕನ್ನಡ ಸಂಘ ಪ್ರಶಸ್ತಿ, ಭೋಗಮಲ್ಲೇಶ್ವರ ಸ್ವಾಮಿ ಪ್ರಶಸ್ತಿ, ಭಗೀರಥ ಪ್ರಶಸ್ತಿ, ಮದೀನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಹೆಸರಿನಲ್ಲಿ ಸ್ಪರ್ಧೆಗಳು ನಡೆದವು. ಕುಸ್ತಿ ಪಟುಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.</p>.<p>ಮುಖಂಡ ಬೆಳ್ಳಿಪ್ರಕಾಶ್, ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಭಾಗವಹಿಸಿದ್ದರು. ಶಿವಾಜಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ಬಿ.ಪಿ. ನಾಗರಾಜ್, ಕಾರ್ಯದರ್ಶಿ ಬಿ.ಎಂ. ಹರೀಶ್, ಸಮಿತಿ ಸದಸ್ಯರಾದ ಉಪ್ಪಿನ ಮಂಜುನಾಥ್, ಬಿ.ಎಂ. ಕಾಂತರಾಜ್, ಮಲ್ಲಿಕಾರ್ಜುನ್, ಪುನೀತ್ ಕುಮಾರ್, ಶಶಿ, ಪ್ರಕಾಶ್, ಪ್ರವೀಣ, ರಮೇಶ ಟಿ.ಎಸ್. ಸಹಕರಿಸಿದರು. ಪೈಲ್ವಾನ್ ಓಂಕಾರ್, ಬಿ.ಎನ್. ಮಂಜುನಾಥ್, ಪೊಲೀಸ್ ಮಂಜುನಾಥ್, ಲೋಕೇಶ್, ಹೊನ್ನಪ್ಪ ತೀರ್ಪುಗಾರರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು (ಕಡೂರು):</strong> ಇಲ್ಲಿನ ವೀರಭದ್ರಸ್ವಾಮಿ, ಭದ್ರಕಾಳಿ ಅಮ್ಮನವರ ರಥೋತ್ಸವ ಅಂಗವಾಗಿ ಶಿವಾಜಿ ವ್ಯಾಯಾಮ ಶಾಲೆ, ಪುರಸಭೆ, ಸಾರ್ವಜನಿಕರ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಬಹಿರಂಗ ಕುಸ್ತಿ ಪಂದ್ಯದಲ್ಲಿ ಹರಿಯಾಣದ ಅಮಿತ್ ಕುಮಾರ್ ಅವರನ್ನು ಮಣಿಸಿದ ಮಹಾರಾಷ್ಟ್ರದ ಪ್ರಥಮೇಶ್ ಪಾಟೀಲ್ ಬೆಳ್ಳಿ ಗದೆ ಜಯಸಿದರು.</p>.<p>ಬೀರೂರಿನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಶುಕ್ರವಾರ ಶಿವಾಜಿ ವ್ಯಾಯಾಮ ಶಾಲೆಯ ಅಧ್ಯಕ್ಷ ಕುಮಾರಸ್ವಾಮಿ ಅಖಾಡದ ಪೂಜೆ ನೆರವೇರಿಸಿ ಸ್ಪರ್ಧೆಗೆ ಚಾಲನೆ ನೀಡಿದ್ದರು. ಶನಿವಾರ, ಭಾನುವಾರ ಪಂದ್ಯಗಳು ನಡೆದವು. ಹಾವೇರಿ, ದಾವಣಗೆರೆ, ಗದಗ, ಹುಬ್ಬಳ್ಳಿ, ಬೆಳಗಾವಿ, ತುಮಕೂರು, ಮೈಸೂರು, ಶಿವಮೊಗ್ಗ, ಶಿಕಾರಿಪುರ, ಧಾರವಾಡ, ಹೊರ ರಾಜ್ಯಗಳಾದ ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್ನ 150ಕ್ಕೂ ಅಧಿಕ ಕುಸ್ತಿ ಪಟುಗಳು ಭಾಗವಹಿಸಿದ್ದರು.</p>.<p>ಕೊನೆಯ ದಿನವಾದ ಭಾನುವಾರ ರಾತ್ರಿ ಪ್ರಥಮ ಬಹುಮಾನ ಬೆಳ್ಳಿಗದೆಗಾಗಿ ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ಕುಸ್ತಿಪಟುಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ತೀವ್ರ ಹಣಾಹಣಿಯಲ್ಲಿ ಇಬ್ಬರೂ ಪೈಲ್ವಾನರು ಸಮಬಲದ ಹೋರಾಟದಿಂದ ವಿವಿಧ ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು. </p>.<p>ವೀರಭದ್ರಸ್ವಾಮಿ ಪ್ರಶಸ್ತಿಗೆ ಕೊಲ್ಲಾಪುರದ ಚರಣ್, ಧಾರವಾಡದ ಶಿವಾನಂದ ಭಂಗಿ ನಡೆಸಿದ ಸೆಣಸಾಟ ರೋಚಕವಾಗಿತ್ತು. ಪೈಲ್ವಾನರು ಹಲವು ಬಾರಿ ಅಖಾಡದಿಂದ ಕೆಳಗಿಳಿದ್ದರಿಂದ ತೀರ್ಪುಗಾರರು ಸಮಯ, ಪಾಯಿಂಟ್ಗೆ ಆಡುವಂತೆ ಸೂಚಿಸಿದ್ದರು. ಶಿವಾನಂದರನ್ನು ಚಿತ್ ಮಾಡುವ ಮೂಲಕ ಕೊಲ್ಲಾಪುರದ ಚರಣ್ ಗೆಲುವು ಸಾಧಿಸಿದರು.</p>.<p>ಪಂದ್ಯಾವಳಿಯಲ್ಲಿ ಬೆಳ್ಳಿ ಲೋಟ, ನಗದು ಬಹುಮಾನ, ಪಾರಿತೋಷಕಗಳ ಕುಸ್ತಿ ನಡೆಸಲಾಯಿತು. ಮೈಲಾರಲಿಂಗೇಶ್ವರ ಪ್ರಶಸ್ತಿ, ಅಂಬಿಗರ ಚೌಡಯ್ಯ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಕಟ್ಟೆ ಕೋಡಿ ಅಂತರಘಟ್ಟಮ್ಮ ಪ್ರಶಸ್ತಿ, ಆಟೊ ಚಾಲಕರು ಮತ್ತು ಮಾಲೀಕರ ಪ್ರಶಸ್ತಿ, ಬಡಗಿ ಕಾರ್ಮಿಕರ ಪ್ರಶಸ್ತಿ, ಲಾರಿ ಚಾಲಕರ ಪ್ರಶಸ್ತಿ, ಅಂಜುಮಾನ್ ಪ್ರಶಸ್ತಿ, ನ್ಯಾಯಬೆಲೆ ಅಂಗಡಿ ಪ್ರಶಸ್ತಿ, ಮರಾಟ ಸಮಾಜ ಪ್ರಶಸ್ತಿ, ಕನ್ನಡ ಸಂಘ ಪ್ರಶಸ್ತಿ, ಭೋಗಮಲ್ಲೇಶ್ವರ ಸ್ವಾಮಿ ಪ್ರಶಸ್ತಿ, ಭಗೀರಥ ಪ್ರಶಸ್ತಿ, ಮದೀನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಹೆಸರಿನಲ್ಲಿ ಸ್ಪರ್ಧೆಗಳು ನಡೆದವು. ಕುಸ್ತಿ ಪಟುಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.</p>.<p>ಮುಖಂಡ ಬೆಳ್ಳಿಪ್ರಕಾಶ್, ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಭಾಗವಹಿಸಿದ್ದರು. ಶಿವಾಜಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ಬಿ.ಪಿ. ನಾಗರಾಜ್, ಕಾರ್ಯದರ್ಶಿ ಬಿ.ಎಂ. ಹರೀಶ್, ಸಮಿತಿ ಸದಸ್ಯರಾದ ಉಪ್ಪಿನ ಮಂಜುನಾಥ್, ಬಿ.ಎಂ. ಕಾಂತರಾಜ್, ಮಲ್ಲಿಕಾರ್ಜುನ್, ಪುನೀತ್ ಕುಮಾರ್, ಶಶಿ, ಪ್ರಕಾಶ್, ಪ್ರವೀಣ, ರಮೇಶ ಟಿ.ಎಸ್. ಸಹಕರಿಸಿದರು. ಪೈಲ್ವಾನ್ ಓಂಕಾರ್, ಬಿ.ಎನ್. ಮಂಜುನಾಥ್, ಪೊಲೀಸ್ ಮಂಜುನಾಥ್, ಲೋಕೇಶ್, ಹೊನ್ನಪ್ಪ ತೀರ್ಪುಗಾರರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>