ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಾಗರವಳ್ಳಿಯಿಂದ ಶುರುವಾದ ನನ್ನ ರಾಜಕೀಯ ಯಾನ ದೆಹಲಿವರೆಗೆ ತಲುಪಿದೆ. ಈ ಯಾನದಲ್ಲಿ ಅನೇಕರು ರಾಜಕೀಯದ ಸರಿತಪ್ಪುಗಳನ್ನು ಹೇಳಿಕೊಟ್ಟಿದ್ದಾರೆ. ದೆಹಲಿಯಲ್ಲಿ ಹೊಸ ರಾಜಕೀಯ ಯಾನವೊಂದು ಆರಂಭವಾಗುತ್ತಿರುವ ಈ ಸಮಯದಲ್ಲಿ ನನ್ನ ಭಾವ ಕಡಲಿನಲ್ಲಿ ಹಳೆಯ ನೆನಪಿನ ಹಾಯಿದೋಣಿಗಳು ತೇಲಿ ಹೋಗುತ್ತಿವೆ’ ಎಂದು ಸಿ.ಟಿ.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.