ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕಾಂಗ್ರೆಸ್ನಲ್ಲಿ ಇದ್ದವರಿಗೇ ನೆಲೆ ಇಲ್ಲ. ಅಲ್ಲಿರುವವರು ಹಗಲುಗನಸು ಕಾಣುತ್ತಿದ್ದಾರೆ. ಚುನಾವಣೆಗೆ ಇನ್ನು ಎರಡು ವರ್ಷ ಇದೆ. ಕಾಂಗ್ರೆಸ್ನಲ್ಲಿ ಈಗಲೇ ಸಿ.ಎಂ ಕುರ್ಚಿಗೆ ಕಿತ್ತಾಡುತ್ತಿದ್ದಾರೆ. ಇಲ್ಲದೇ ಇರುವ ಸಿ.ಎಂ ಕುರ್ಚಿಗೆ ಗುದ್ದಾಡುವ ಸ್ಥಿತಿಯಲ್ಲಿರುವ ಪಕ್ಷಕ್ಕೆ ಯಾರು ಹೋಗುತ್ತಾರೆ?’ ಎಂದು ಪ್ರಶ್ನಿಸಿದರು.