‘ನೀವು ವೈಯುಕ್ತಿಕ ಸ್ವಾರ್ಥದ ದೃಷ್ಟಿಯಿಂದ ದೇಗುಲಕ್ಕೆ ತೆರಳಬಹುದು. ಕಳೆದಕೊಂಡಿರುವ ದತ್ತಪೀಠವನ್ನು ಮರಳಿ ಪಡೆಯಲು ಸಂಕಲ್ಪವಾಗಿ ನಾವು ದತ್ತಜಯಂತಿ, ದತ್ತಮಾಲೆ ಅಭಿಯಾನ ಆರಂಭಿಸಿದ್ದೇವೆ. ಇದು ನಮ್ಮ ತಲೆಮಾರಿನಿಂದ ಆರಂಭವಾಗಿರಬಹುದು, ಈ ತಲೆಮಾರಿಗೆ ಕೊನೆಯಾಗುವುದಿಲ್ಲ. ದತ್ತಪೀಠ ಮುಕ್ತಿ ನಂತರವೂ ಭಕ್ತಿಯ ಆಂದೋಲನವಾಗಿ ಮುಂದುವರಿಯುತ್ತದೆ. ಇದಕ್ಕೆ ಅಪಮಾನ, ಅವಹೇಳನ ಮಾಡಬಾರದು’ ಎಂದರು.