‘ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ವರ್ತಕ ಸಮುದಾಯ ಸಿದ್ಧ ಇದೆ. ಇದನ್ನು ಮುಂದೂಡಬೇಕೆಂದು ನಾವು ಬಯಸುವುದಿಲ್ಲ. ದೇಶದಾದ್ಯಂತ ಏಕಕಾಲಕ್ಕೆ ಜಾರಿಗೆ ತಂದರೆ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಇದೆ. ಫೆಬ್ರುವರಿ 15ರಂದು ಜಾರಿಗೆ ತರಲು ಹೊರಟಾಗ ವ್ಯವಸ್ಥೆ ಕೈಕೊಟ್ಟಿತ್ತು. ಇದೇ ಕಾರಣಕ್ಕೆ ಇದನ್ನು ಹಂತ ಹಂತವಾಗಿ ಜಾರಿಗೆ ತರಬೇಕು ಎನ್ನುವುದು ನಮ್ಮ ಸಲಹೆಯಾಗಿದೆ’ ಎಂದು ‘ಸಿಎಐಟಿ’ಯ ರಾಷ್ಟ್ರೀಯ ಅಧ್ಯಕ್ಷ ಬಿ. ಸಿ. ಭಾರ್ತಿಯಾ ಹೇಳಿದ್ದಾರೆ.