ಚಾರ್ಮಾಡಿ ಘಾಟಿಯ ಒಂದು ತಿರುವಿನ ಭಾಗದಲ್ಲಿ ಕುಸಿದ ದಿಣ್ಣೆಗೆ ತಡೆಗೋಡೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ರಸ್ತೆ ಅಭಿವೃದ್ಧಿಯಾಗದೇ ಇತರ ಘನ ವಾಹನಗಳು, ರಾಜ್ಯ ಸಾರಿಗೆ ಬಸ್ಗಳ ಸಂಚಾರವೂ ನಿಷೇಧವಾಗಿಯೇ ಉಳಿದಿದೆ. ಈ ರಸ್ತೆಯಲ್ಲಿ ನಿಯಮಿತ ಮಿನಿ ಬಸ್ ಸಂಚಾರ ಇದ್ದರೂ ಸಂಜೆ 6 ಗಂಟೆ ನಂತರ ಮಿನಿ ಬಸ್ ಸಂಚಾರ ಇಲ್ಲದಿರುವುದರಿಂದ ಆಸ್ಪತ್ರೆ, ಇತರ ಕಡೆ ಸಾಗುವವರಿಗೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.