<p>ಚಿಕ್ಕಮಗಳೂರು: ಆಟೊ ಗ್ಯಾಸ್ ದರವನ್ನು ಏಕರೂಪದಲ್ಲಿ ನಿಗದಿ ಮಾಡುವಂತೆ ಆಗ್ರಹಿಸಿ ಕನ್ನಡಸೇನೆ ಆಟೊ ಚಾಲಕರ ಘಟಕದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.</p>.<p>ಕನ್ನಡಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ‘ನಗರದ ಗ್ಯಾಸ್ ಏಜೆನ್ಸಿಗಳು ಒಂದೊಂದು ಬಂಕ್ನಲ್ಲಿ ಒಂದೊಂದು ರೀತಿಯ ದರ ನಿಗದಿ ಮಾಡಿಕೊಂಡಿವೆ. ಒಂದು ಬಂಕ್ನಲ್ಲಿ ಕೆ.ಜಿ ಗ್ಯಾಸ್ಗೆ ₹120 ಇದ್ದರೆ ಮತ್ತೊಂದು ಬಂಕ್ನಲ್ಲಿ ₹90 ಇದೆ ಎಂದು ಹೇಳಿದರು.</p>.<p>‘ಯುದ್ಧದ ಕಾರಣದಿಂದ ಗ್ಯಾಸ್ ದೊರೆಯದೆ ಆಟೊ ಚಾಲಕರ ದುಡಿಮೆಗೆ ಪೆಟ್ಟು ಬಿದ್ದಿದೆ. ಈ ನಡುವೆ ಗ್ಯಾಸ್ ಏಜೆನ್ಸಿಗಳು ಒಂದೊಂದು ರೀತಿ ದರ ನಿಗದಿ ಮಾಡಿವೆ. ಬಡ ಚಾಲಕರು ಜೀವನ ನಡೆಸುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p>ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಒಂದೇ ದರ ನಿಗದಿ ಮಾಡಬೇಕು. ನಿಗದಿತ ದರದಲ್ಲೇ ಎಲ್ಪಿಜಿ ಗ್ಯಾಸ್ ವಿತರಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಆಟೊ ಚಾಲಕರ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ‘ಗ್ಯಾಸ್ ಏಜೆನ್ಸಿಗಳು ದಿನಕ್ಕೊಂದು ದರ ನಿಗದಿ ಮಾಡಿದರೆ ಆಟೊ ಚಾಲಕರು ಬದುಕುವುದು ಕಷ್ಟ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.</p>.<p>ಕನ್ನಡಸೇನೆ ಮುಖಂಡರಾದ ಶಂಕರೇಗೌಡ, ನವೀನ್ಕುಮಾರ್, ವಿಶ್ವನಾಥ್, ಪಾಲಾಕ್ಷಿ, ಹುಣಸೇಮಕ್ಕಿ ಲಕ್ಷ್ಮಣ್, ಷರೀಫ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-126-754142529</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಆಟೊ ಗ್ಯಾಸ್ ದರವನ್ನು ಏಕರೂಪದಲ್ಲಿ ನಿಗದಿ ಮಾಡುವಂತೆ ಆಗ್ರಹಿಸಿ ಕನ್ನಡಸೇನೆ ಆಟೊ ಚಾಲಕರ ಘಟಕದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.</p>.<p>ಕನ್ನಡಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ‘ನಗರದ ಗ್ಯಾಸ್ ಏಜೆನ್ಸಿಗಳು ಒಂದೊಂದು ಬಂಕ್ನಲ್ಲಿ ಒಂದೊಂದು ರೀತಿಯ ದರ ನಿಗದಿ ಮಾಡಿಕೊಂಡಿವೆ. ಒಂದು ಬಂಕ್ನಲ್ಲಿ ಕೆ.ಜಿ ಗ್ಯಾಸ್ಗೆ ₹120 ಇದ್ದರೆ ಮತ್ತೊಂದು ಬಂಕ್ನಲ್ಲಿ ₹90 ಇದೆ ಎಂದು ಹೇಳಿದರು.</p>.<p>‘ಯುದ್ಧದ ಕಾರಣದಿಂದ ಗ್ಯಾಸ್ ದೊರೆಯದೆ ಆಟೊ ಚಾಲಕರ ದುಡಿಮೆಗೆ ಪೆಟ್ಟು ಬಿದ್ದಿದೆ. ಈ ನಡುವೆ ಗ್ಯಾಸ್ ಏಜೆನ್ಸಿಗಳು ಒಂದೊಂದು ರೀತಿ ದರ ನಿಗದಿ ಮಾಡಿವೆ. ಬಡ ಚಾಲಕರು ಜೀವನ ನಡೆಸುವುದು ಹೇಗೆ’ ಎಂದು ಪ್ರಶ್ನಿಸಿದರು.</p>.<p>ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಒಂದೇ ದರ ನಿಗದಿ ಮಾಡಬೇಕು. ನಿಗದಿತ ದರದಲ್ಲೇ ಎಲ್ಪಿಜಿ ಗ್ಯಾಸ್ ವಿತರಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಆಟೊ ಚಾಲಕರ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ‘ಗ್ಯಾಸ್ ಏಜೆನ್ಸಿಗಳು ದಿನಕ್ಕೊಂದು ದರ ನಿಗದಿ ಮಾಡಿದರೆ ಆಟೊ ಚಾಲಕರು ಬದುಕುವುದು ಕಷ್ಟ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.</p>.<p>ಕನ್ನಡಸೇನೆ ಮುಖಂಡರಾದ ಶಂಕರೇಗೌಡ, ನವೀನ್ಕುಮಾರ್, ವಿಶ್ವನಾಥ್, ಪಾಲಾಕ್ಷಿ, ಹುಣಸೇಮಕ್ಕಿ ಲಕ್ಷ್ಮಣ್, ಷರೀಫ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-126-754142529</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>