<p><strong>ಚಿಕ್ಕಮಗಳೂರು:</strong> ಶಕ್ತಿ ಯೋಜನೆ ಜಾರಿಯಲ್ಲಿದೆ, ಮುಗಿಬಿದ್ದು ಬಸ್ಗಳಲ್ಲಿ ಜನ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಬಸ್ಗಳ ಕೊರತೆಯಿಂದ ಹಗಲು–ರಾತ್ರಿ ಬಿಡುವಿಲ್ಲದೆ ಬಸ್ಗಳು ಕಾರ್ಯಾಚರಣೆ ಮಾಡುವಂತಾಗಿದೆ.</p>.<p>ಜಿಲ್ಲೆಯ ಮಲೆನಾಡು ಭಾಗ ಗುಡ್ಡಗಾಡು ಪ್ರದೇಶವನ್ನು ಹೊಂದಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಶಕ್ತಿ ಯೋಜನೆಯಡಿ ಈವರೆಗೆ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ 6.15 ಕೋಟಿ ಟ್ರಿಪ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಕೆಎಸ್ಆರ್ಟಿಸಿಗೆ ₹239.24 ಕೋಟಿಯನ್ನೂ ಸರ್ಕಾರ ಜಿಲ್ಲೆಯ ಮಹಿಳಾ ಪ್ರಯಾಣಿಕರಿಗಾಗಿ ಪಾವತಿಸಿದೆ.</p>.<p>ಆದರೆ, ಬಸ್ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಡಿಪೊಗೆ ಬರುವ ಸಿಬ್ಬಂದಿ ಕೂಡ ಬಸ್ ತೆಗೆದುಕೊಂಡು ಹೋಗಲು ಕಾಯಬೇಕಾದ ಸ್ಥಿತಿ ಇದೆ. ಡಿಪೊಗೆ ಬಸ್ಗಳು ಬಂದ ಕೂಡಲೇ ಸಿಬ್ಬಂದಿ ಪಡೆದು ಹೋಗುತ್ತಿದ್ದಾರೆ. ಕೆಲವು ಬಸ್ಗಳು ದಿನದ 24 ಗಂಟೆಯೂ ಸಂಚಾರ ಮಾಡುತ್ತಿವೆ. ಅವುಗಳನ್ನು ನಿರ್ವಹಣೆ ಮಾಡಲು ಸಹ ಸಮಯ ಇಲ್ಲದಂತಾಗಿದೆ.</p>.<p>ಬೆಂಗಳೂರು, ಮೈಸೂರು ಸೇರಿ ದೂರದ ಊರುಗಳಿಗೆ ಹೋಗುತ್ತಿರುವ ಬಸ್ಗಳು ವಾಪಸ್ ಬಂದ ಕೂಡಲೇ ಬೇರೆ ಸಿಬ್ಬಂದಿ ಪಡೆದು ಹೋಗುತ್ತಿದ್ದಾರೆ. ಡಿಪೊ ಸಿಬ್ಬಂದಿ ಬಸ್ ತೊಳೆದು ಸಾಮಾನ್ಯ ಚೆಕ್ಅಪ್ ಮಾಡಿ ಕಳುಹಿಸುತ್ತಿದ್ದಾರೆ. ವಿಶ್ರಾಂತಿಯೇ ಇಲ್ಲದೆ ಹಗಲು ರಾತ್ರಿ ಸಂಚಾರ ಮಾಡುತ್ತಿರುವ ಬಸ್ಗಳಲ್ಲಿ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳೂ ಜನರನ್ನು ಕಾಡುತ್ತಿವೆ.</p>.<p>ಇತ್ತೀಚೆಗೆ ನಗರದ ಬೇಲೂರು ರಸ್ತೆಯಲ್ಲಿ ಬಸ್ ಒಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ರಸ್ತೆಯಲ್ಲಿ ಅಲ್ಲಲ್ಲಿ ಬಸ್ಗಳು ಕೆಟ್ಟು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. 2 ಸಾವಿರ ಬಸ್ಗಳನ್ನು ಖರೀದಿ ಮಾಡುವುದಾಗಿ ಸರ್ಕಾರ ಹೇಳಿದೆ. ಬಸ್ಗಳು ಖರೀದಿಯಾಗಿ ಜಿಲ್ಲೆಗೆ ಬರಲು ಇನ್ನೂ ವರ್ಷಗಟ್ಟಲೆ ಸಮಯ ಬೇಕಾಗಲಿದೆ. ಅಲ್ಲಿಯ ತನಕ ನಿಗದಿತ ಮಾರ್ಗಗಳಿಗೆ ಬಸ್ ಕಳುಹಿಸುವುದೇ ಅಧಿಕಾರಿಗಳಿಗೆ ಕಷ್ಟವಾಗಿದೆ.</p>.<p>‘ಬಸ್ಗಳ ಕೊರತೆ ಇರುವುದು ನಿಜ. ಹೊಸದಾಗಿ ಬಸ್ಗಳನ್ನು ನೀಡುವಂತೆ ಕೇಂದ್ರ ಕಚೇರಿಗೆ ಮನವಿ ಮಾಡಲಾಗಿದೆ’ ಎನ್ನುತ್ತಾರೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್.</p>.<p><strong>250 ಗ್ರಾಮಗಳಿಗೆ ಇಲ್ಲ ಬಸ್ </strong></p><p>ಜಿಲ್ಲೆಯ 250 ಗ್ರಾಮಗಳಿಗೆ ಇನ್ನೂ ಕೆಎಸ್ಆರ್ಟಿಸಿ ಬಸ್ ಸೇವೆಯೇ ಇಲ್ಲವಾಗಿದೆ. ಹೆದ್ದಾರಿಯಿಂದ ಆರೇಳು ಕಿಲೋ ಮೀಟರ್ ದೂರದಲ್ಲಿ ಇರುವ ಗ್ರಾಮಗಳಿಗೆ ಕೂಡ ಬಸ್ ತಲುಪಿಲ್ಲ. ಆಟೊರಿಕ್ಷಾ ಪಿಕಪ್ ಸೇರಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪರಿಸ್ಥಿತಿ ಇದೆ. ಬಸ್ ಸೇವೆ ಇಲ್ಲದ 250 ಗ್ರಾಮಗಳ ಪೈಕಿ ನಗರದಿಂದ ಆರೇಳು ಕಿಲೋ ಮೀಟರ್ ದೂರದಲ್ಲಿರುವ ಹಿರೇಕೊಳಲೆ ಚಿಕ್ಕೊಳಲೆ ಗ್ರಾಮಗಳೂ ಸೇರಿವೆ. </p><p>ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಮೇಲಿನ ಹುಲುವತ್ತಿ ಕೊಳಗಾಮೆ ಜಾಗರ ಭಾಗಕ್ಕೆ ಬಸ್ ಸಂಪರ್ಕವೇ ಇಲ್ಲವಾಗಿದೆ. ಗಿರಿಭಾಗದ ಅತ್ತಿಗುಂಡಿಯಿಂದ ಮಹಲ್ ತನಕ ಹೋಗಿ ಬರುವ ಬಸ್ಗಳು ಆಗಾಗ ಕೆಟ್ಟು ನಿಲ್ಲುವುದು ಸಾಮಾನ್ಯ. ಮಿನಿ ಮಾತ್ರ ತೆರಳಲು ಸಾಧ್ಯವಿರುವ ಮಾರ್ಗ ಇದಾಗಿದ್ದು ಬಸ್ ಕೆಟ್ಟರೆ ಬೇರೆ ಬಸ್ ಕಳುಹಿಸಲು ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ನಗರಕ್ಕೆ ಬರುವ ಜನ ಪರದಾಡುವುದು ಸಾಮಾನ್ಯವಾಗಿದೆ. ನರಸಿಂಹರಾಜಪುರ ತಾಲ್ಲೂಕಿನ 36 ಗ್ರಾಮ ಶೃಂಗೇರಿ ತಾಲ್ಲೂಕಿನ 33 ಕೊಪ್ಪ 37 ಮೂಡಿಗೆರೆ 20 ಅಜ್ಜಂಪುರ 43 ತರೀಕೆರೆ 36 ಕಡೂರು 17 ಮತ್ತು ಚಿಕ್ಕಮಗಳೂರು ತಾಲ್ಲೂಕಿನ 28 ಗ್ರಾಮಗಳಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಶಕ್ತಿ ಯೋಜನೆ ಜಾರಿಯಲ್ಲಿದೆ, ಮುಗಿಬಿದ್ದು ಬಸ್ಗಳಲ್ಲಿ ಜನ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಬಸ್ಗಳ ಕೊರತೆಯಿಂದ ಹಗಲು–ರಾತ್ರಿ ಬಿಡುವಿಲ್ಲದೆ ಬಸ್ಗಳು ಕಾರ್ಯಾಚರಣೆ ಮಾಡುವಂತಾಗಿದೆ.</p>.<p>ಜಿಲ್ಲೆಯ ಮಲೆನಾಡು ಭಾಗ ಗುಡ್ಡಗಾಡು ಪ್ರದೇಶವನ್ನು ಹೊಂದಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಶಕ್ತಿ ಯೋಜನೆಯಡಿ ಈವರೆಗೆ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ 6.15 ಕೋಟಿ ಟ್ರಿಪ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಕೆಎಸ್ಆರ್ಟಿಸಿಗೆ ₹239.24 ಕೋಟಿಯನ್ನೂ ಸರ್ಕಾರ ಜಿಲ್ಲೆಯ ಮಹಿಳಾ ಪ್ರಯಾಣಿಕರಿಗಾಗಿ ಪಾವತಿಸಿದೆ.</p>.<p>ಆದರೆ, ಬಸ್ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಡಿಪೊಗೆ ಬರುವ ಸಿಬ್ಬಂದಿ ಕೂಡ ಬಸ್ ತೆಗೆದುಕೊಂಡು ಹೋಗಲು ಕಾಯಬೇಕಾದ ಸ್ಥಿತಿ ಇದೆ. ಡಿಪೊಗೆ ಬಸ್ಗಳು ಬಂದ ಕೂಡಲೇ ಸಿಬ್ಬಂದಿ ಪಡೆದು ಹೋಗುತ್ತಿದ್ದಾರೆ. ಕೆಲವು ಬಸ್ಗಳು ದಿನದ 24 ಗಂಟೆಯೂ ಸಂಚಾರ ಮಾಡುತ್ತಿವೆ. ಅವುಗಳನ್ನು ನಿರ್ವಹಣೆ ಮಾಡಲು ಸಹ ಸಮಯ ಇಲ್ಲದಂತಾಗಿದೆ.</p>.<p>ಬೆಂಗಳೂರು, ಮೈಸೂರು ಸೇರಿ ದೂರದ ಊರುಗಳಿಗೆ ಹೋಗುತ್ತಿರುವ ಬಸ್ಗಳು ವಾಪಸ್ ಬಂದ ಕೂಡಲೇ ಬೇರೆ ಸಿಬ್ಬಂದಿ ಪಡೆದು ಹೋಗುತ್ತಿದ್ದಾರೆ. ಡಿಪೊ ಸಿಬ್ಬಂದಿ ಬಸ್ ತೊಳೆದು ಸಾಮಾನ್ಯ ಚೆಕ್ಅಪ್ ಮಾಡಿ ಕಳುಹಿಸುತ್ತಿದ್ದಾರೆ. ವಿಶ್ರಾಂತಿಯೇ ಇಲ್ಲದೆ ಹಗಲು ರಾತ್ರಿ ಸಂಚಾರ ಮಾಡುತ್ತಿರುವ ಬಸ್ಗಳಲ್ಲಿ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳೂ ಜನರನ್ನು ಕಾಡುತ್ತಿವೆ.</p>.<p>ಇತ್ತೀಚೆಗೆ ನಗರದ ಬೇಲೂರು ರಸ್ತೆಯಲ್ಲಿ ಬಸ್ ಒಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ರಸ್ತೆಯಲ್ಲಿ ಅಲ್ಲಲ್ಲಿ ಬಸ್ಗಳು ಕೆಟ್ಟು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. 2 ಸಾವಿರ ಬಸ್ಗಳನ್ನು ಖರೀದಿ ಮಾಡುವುದಾಗಿ ಸರ್ಕಾರ ಹೇಳಿದೆ. ಬಸ್ಗಳು ಖರೀದಿಯಾಗಿ ಜಿಲ್ಲೆಗೆ ಬರಲು ಇನ್ನೂ ವರ್ಷಗಟ್ಟಲೆ ಸಮಯ ಬೇಕಾಗಲಿದೆ. ಅಲ್ಲಿಯ ತನಕ ನಿಗದಿತ ಮಾರ್ಗಗಳಿಗೆ ಬಸ್ ಕಳುಹಿಸುವುದೇ ಅಧಿಕಾರಿಗಳಿಗೆ ಕಷ್ಟವಾಗಿದೆ.</p>.<p>‘ಬಸ್ಗಳ ಕೊರತೆ ಇರುವುದು ನಿಜ. ಹೊಸದಾಗಿ ಬಸ್ಗಳನ್ನು ನೀಡುವಂತೆ ಕೇಂದ್ರ ಕಚೇರಿಗೆ ಮನವಿ ಮಾಡಲಾಗಿದೆ’ ಎನ್ನುತ್ತಾರೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್.</p>.<p><strong>250 ಗ್ರಾಮಗಳಿಗೆ ಇಲ್ಲ ಬಸ್ </strong></p><p>ಜಿಲ್ಲೆಯ 250 ಗ್ರಾಮಗಳಿಗೆ ಇನ್ನೂ ಕೆಎಸ್ಆರ್ಟಿಸಿ ಬಸ್ ಸೇವೆಯೇ ಇಲ್ಲವಾಗಿದೆ. ಹೆದ್ದಾರಿಯಿಂದ ಆರೇಳು ಕಿಲೋ ಮೀಟರ್ ದೂರದಲ್ಲಿ ಇರುವ ಗ್ರಾಮಗಳಿಗೆ ಕೂಡ ಬಸ್ ತಲುಪಿಲ್ಲ. ಆಟೊರಿಕ್ಷಾ ಪಿಕಪ್ ಸೇರಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪರಿಸ್ಥಿತಿ ಇದೆ. ಬಸ್ ಸೇವೆ ಇಲ್ಲದ 250 ಗ್ರಾಮಗಳ ಪೈಕಿ ನಗರದಿಂದ ಆರೇಳು ಕಿಲೋ ಮೀಟರ್ ದೂರದಲ್ಲಿರುವ ಹಿರೇಕೊಳಲೆ ಚಿಕ್ಕೊಳಲೆ ಗ್ರಾಮಗಳೂ ಸೇರಿವೆ. </p><p>ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಮೇಲಿನ ಹುಲುವತ್ತಿ ಕೊಳಗಾಮೆ ಜಾಗರ ಭಾಗಕ್ಕೆ ಬಸ್ ಸಂಪರ್ಕವೇ ಇಲ್ಲವಾಗಿದೆ. ಗಿರಿಭಾಗದ ಅತ್ತಿಗುಂಡಿಯಿಂದ ಮಹಲ್ ತನಕ ಹೋಗಿ ಬರುವ ಬಸ್ಗಳು ಆಗಾಗ ಕೆಟ್ಟು ನಿಲ್ಲುವುದು ಸಾಮಾನ್ಯ. ಮಿನಿ ಮಾತ್ರ ತೆರಳಲು ಸಾಧ್ಯವಿರುವ ಮಾರ್ಗ ಇದಾಗಿದ್ದು ಬಸ್ ಕೆಟ್ಟರೆ ಬೇರೆ ಬಸ್ ಕಳುಹಿಸಲು ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ನಗರಕ್ಕೆ ಬರುವ ಜನ ಪರದಾಡುವುದು ಸಾಮಾನ್ಯವಾಗಿದೆ. ನರಸಿಂಹರಾಜಪುರ ತಾಲ್ಲೂಕಿನ 36 ಗ್ರಾಮ ಶೃಂಗೇರಿ ತಾಲ್ಲೂಕಿನ 33 ಕೊಪ್ಪ 37 ಮೂಡಿಗೆರೆ 20 ಅಜ್ಜಂಪುರ 43 ತರೀಕೆರೆ 36 ಕಡೂರು 17 ಮತ್ತು ಚಿಕ್ಕಮಗಳೂರು ತಾಲ್ಲೂಕಿನ 28 ಗ್ರಾಮಗಳಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>