ಗಿರಿಜನ ಆಶ್ರಮ ಶಾಲೆಯಲ್ಲಿದ್ದ ಅನಂತ ಅವರ ಪತ್ನಿ ಮತ್ತು ಪುತ್ರಿಯನ್ನು ಬುಧವಾರ ಭೇಟಿ ಮಾಡಿದ ಉಪ ವಿಭಾಗಾಧಿಕಾರಿ ಡಾ. ನಾಗರಾಜ್, ತಹಶೀಲ್ದಾರ್ ರಮೇಶ್, ಕಂದಾಯ ನಿರೀಕ್ಷಕ ಅಜ್ಜೇಗೌಡ ಮತ್ತು ತಂಡ ಅವರಿಗೆ ಧೈರ್ಯ ತುಂಬಿತು. ಆನಂತರ ಬಲಿಗೆ ಸಮೀಪದ ಗುಹೆಯಲ್ಲಿದ್ದ ಅನಂತ ಅವರನ್ನು ಮನವೊಲಿಸಿ ಕಳಸಕ್ಕೆ ಕರೆದುಕೊಂಡು ಬರಲಾಯಿತು. ಅವರ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರಲ್ಲಿ ತಪಾಸಣೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.