<p><strong>ಚಿಕ್ಕಮಗಳೂರು</strong>: ಕಳೆದ ವಾರಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಹಣ್ಣುಗಳ ದರ ಸ್ಚಲ್ಪ ದುಬಾರಿಯಾಗಿದೆ. ತರಹೇವಾರಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಆವಕವಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಇದರಿಂದಾಗಿ ಬೆಲೆಯೂ ಸ್ವಲ್ಪ ದುಬಾರಿಯಾಗಿದೆ.</p>.<p>ಬಾದಾಮಿ ಮಾವು ಕೆ.ಜಿಗೆ ₹100, ಮಲ್ಲಿಕಾ ₹120, ಕಸಿ ಮಾವು ಕೆ.ಜಿಗೆ ₹80, ಸೀಬೆಹಣ್ಣು ₹140, ದಾಳಿಂಬೆ ₹240, ಮೂಸಂಬಿ ₹120, ಕಿತ್ತಳೆ ₹240, ಸೇಬು ₹300, ಕರಬೂಜ ₹50, ಕಲ್ಲಂಗಡಿ ₹32, ಬಾಳೆಹಣ್ಣು ₹70, ದ್ರಾಕ್ಷಿ ₹150ಕ್ಕೆ ಮಾರಾಟವಾಗುತ್ತಿದೆ.</p>.<p>ತುಮಕೂರು, ತಿಪಟೂರು, ಕೋಲಾರ, ಶ್ರೀನಿವಾಸಪುರ, ಆಂಧ್ರಪ್ರದೇಶದಿಂದ ಜಿಲ್ಲೆಗೆ ಮಾವಿನ ಹಣ್ಣು ಆವಕವಾಗುತ್ತಿದೆ. ಜಿಲ್ಲೆಯಲ್ಲಿ ನಾಟಿ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಮಾವಿನ ಗೊಜ್ಜು, ಸಾಂಬರ್, ಗಸಿ, ಸೀಕರಣೆ ಮಾಡಲು ಉತ್ತಮವಾಗಿದೆ. ಜತೆಗೆ ನಾಟಿ ಔಷಧಿಯ ಗುಣವೂ ಇದೆ. ಪ್ರಸ್ತುತ ನಾಟಿ ಮಾವಿನ ಹಣ್ಣನ ಬೆಲೆ ಕೆ.ಜಿಗೆ ₹80 ಇದೆ.</p>.<p>ಜಿಲ್ಲೆಯಲ್ಲಿ ಮಲಬಾರ್ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಮಲಬಾರ್ ಹಣ್ಣು ಮಾರುಕಟ್ಟೆಗೆ ಬಂದಿಲ್ಲ. ಜೂನ್ನಿಂದ ಆವಕ ಆಗಬಹುದು ಎಂದು ಎ.ಜೆ ಹಣ್ಣಿನ ಅಂಗಡಿ ಮಾಲೀಕ ತಬ್ರೇಜ್ ಹೇಳಿದರು.</p>.<p>ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಎಳನೀರು ಬೆಲೆ ₹60 ಇದೆ. ಇದೀಗ ಮಳೆ ಕಾಣಿಸಿಕೊಂಡು ವಾತಾವರಣ ಕೊಂಚ ತಂಪಾದರೂ ಎಳನೀರು ಬೆಲೆ ಅಷ್ಟೇ ಇದೆ ಎನ್ನುತ್ತಾರೆ ಅವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-126-1647950583</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಕಳೆದ ವಾರಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಹಣ್ಣುಗಳ ದರ ಸ್ಚಲ್ಪ ದುಬಾರಿಯಾಗಿದೆ. ತರಹೇವಾರಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಆವಕವಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಇದರಿಂದಾಗಿ ಬೆಲೆಯೂ ಸ್ವಲ್ಪ ದುಬಾರಿಯಾಗಿದೆ.</p>.<p>ಬಾದಾಮಿ ಮಾವು ಕೆ.ಜಿಗೆ ₹100, ಮಲ್ಲಿಕಾ ₹120, ಕಸಿ ಮಾವು ಕೆ.ಜಿಗೆ ₹80, ಸೀಬೆಹಣ್ಣು ₹140, ದಾಳಿಂಬೆ ₹240, ಮೂಸಂಬಿ ₹120, ಕಿತ್ತಳೆ ₹240, ಸೇಬು ₹300, ಕರಬೂಜ ₹50, ಕಲ್ಲಂಗಡಿ ₹32, ಬಾಳೆಹಣ್ಣು ₹70, ದ್ರಾಕ್ಷಿ ₹150ಕ್ಕೆ ಮಾರಾಟವಾಗುತ್ತಿದೆ.</p>.<p>ತುಮಕೂರು, ತಿಪಟೂರು, ಕೋಲಾರ, ಶ್ರೀನಿವಾಸಪುರ, ಆಂಧ್ರಪ್ರದೇಶದಿಂದ ಜಿಲ್ಲೆಗೆ ಮಾವಿನ ಹಣ್ಣು ಆವಕವಾಗುತ್ತಿದೆ. ಜಿಲ್ಲೆಯಲ್ಲಿ ನಾಟಿ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಮಾವಿನ ಗೊಜ್ಜು, ಸಾಂಬರ್, ಗಸಿ, ಸೀಕರಣೆ ಮಾಡಲು ಉತ್ತಮವಾಗಿದೆ. ಜತೆಗೆ ನಾಟಿ ಔಷಧಿಯ ಗುಣವೂ ಇದೆ. ಪ್ರಸ್ತುತ ನಾಟಿ ಮಾವಿನ ಹಣ್ಣನ ಬೆಲೆ ಕೆ.ಜಿಗೆ ₹80 ಇದೆ.</p>.<p>ಜಿಲ್ಲೆಯಲ್ಲಿ ಮಲಬಾರ್ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಮಲಬಾರ್ ಹಣ್ಣು ಮಾರುಕಟ್ಟೆಗೆ ಬಂದಿಲ್ಲ. ಜೂನ್ನಿಂದ ಆವಕ ಆಗಬಹುದು ಎಂದು ಎ.ಜೆ ಹಣ್ಣಿನ ಅಂಗಡಿ ಮಾಲೀಕ ತಬ್ರೇಜ್ ಹೇಳಿದರು.</p>.<p>ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಎಳನೀರು ಬೆಲೆ ₹60 ಇದೆ. ಇದೀಗ ಮಳೆ ಕಾಣಿಸಿಕೊಂಡು ವಾತಾವರಣ ಕೊಂಚ ತಂಪಾದರೂ ಎಳನೀರು ಬೆಲೆ ಅಷ್ಟೇ ಇದೆ ಎನ್ನುತ್ತಾರೆ ಅವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-126-1647950583</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>