<p>ಚಿಕ್ಕಮಗಳೂರು: ಅಭಿವೃದ್ಧಿ ಕಾಮಗಾರಿ ನಡೆಯುವಾಗ ಗುತ್ತಿಗೆದಾರರು ಮುಖ್ಯವಲ್ಲ, ಕ್ಷೇತ್ರದ ಜನರು ಮುಖ್ಯ. ಸರ್ಕಾರ ನೀಡಿರುವ ಹಣ ಸದುಪಯೋಗ ಆಗಬೇಕು, ಗುಣಮಟ್ಟದ ರಸ್ತೆ ಆಗಬೇಕು ಎಂಬುದು ನನ್ನ ಒತ್ತಾಸೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.</p>.<p>ರಾಂಪುರ-ಆದಿಶಕ್ತಿನಗರ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಹಣದಿಂದ ಜನರಿಗೆ ಅನುಕೂಲವಾಗಬೇಕು, ಇದು ಜನಪ್ರತಿನಿಧಿಯ ಕೆಲಸ ಎಂದರು.</p>.<p>ರಾಂಪುರ ಸರ್ಕಲ್ನಿಂದ ಆದಿಶಕ್ತಿನಗರ-ಕೆ.ಆರ್.ಪೇಟೆ, ಮಾಳಲೂರು ರಸ್ತೆಯವರೆಗೆ 3 ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ₹8 ಕೋಟಿ ವೆಚ್ಚದಲ್ಲಿ ಮಾಡಲಾಗುವುದು. ಕಾಮಗಾರಿಗೆ 2024ರ ಅ.30ರಂದು ಚಾಲನೆ ನೀಡಲಾಗಿತ್ತು. ಇದಕ್ಕೆ ಕೆಲವರು ಮೊದಲು ತಾಂತ್ರಿಕ ಕಾರಣದ ತಡೆ ಒಡ್ಡಿದ್ದರು. ಆಗ ನಾವು ಸುಮ್ಮನಾಗಿದ್ದೆವು ಎಂದು ಹೇಳಿದ್ದರು.</p>.<p>ಈ ಭಾಗದ ಜನ ಹಾಗೂ ಆಟೊ ಚಾಲಕರು ಮೊದಲು ರಾಂಪುರದಿಂದ ಕಾಮಗಾರಿಯನ್ನು ಆರಂಭಿಸಬೇಕೆಂದು ಹೇಳಿದ್ದರು. ರಾಂಪುರ, ಆದಿಶಕ್ತಿ ನಗರ ಗಳಲ್ಲಿ ಹೆಚ್ಚು ಮನೆಗಳಿರು ಪ್ರದೇಶವಾಗಿರುವುದರಿಂದ ಮಳಲೂರು ರಸ್ತೆಯಿಂದ ಕಾಮಗಾರಿ ಆರಂಭಿಸಿದ್ದರು ಎಂದರು.</p>.<p>ಒಂದೂವರೆ ವರ್ಷಗಳಿಂದ ಜನರ ಒತ್ತಡ, ಯಾವುದೇ ಕಾರ್ಯಗಳಿಗೆ ಈ ಭಾಗದಲ್ಲಿ ಓಡಾಡದ ಪರಿಸ್ಥಿತಿ ಇತ್ತು. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಈ ರಸ್ತೆ ಕಾಮಗಾರಿಗೆ ಆಗ್ರಹಿಸುತ್ತಿದ್ದರು. ಪಕ್ಷಾತೀತವಾಗಿ ಜನರು ಕೇಳುತ್ತಿದ್ದರು. ಇಂದು ರಾಂಪುರದಿಂದ ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.</p>.<p>ಕಾಮಗಾರಿ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದರೂ ನಂತರ ಪತ್ರ ವ್ಯವಹಾರ ಆರಂಭಿಸಿದೆ. ಕಾಮಗಾರಿ ಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.</p>.<p>ರಂಗನಾಥ್, ಉಲ್ಲಾಸ್, ಪರಮೇಶ್, ಬೇಬಿ ಜಾನ್, ವಾಜಿದ್, ಕಾರ್ಯಪಾಲಕ ಎಂಜಿನಿಯರ್ ದಿವಾಕರ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-126-1932603691</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಅಭಿವೃದ್ಧಿ ಕಾಮಗಾರಿ ನಡೆಯುವಾಗ ಗುತ್ತಿಗೆದಾರರು ಮುಖ್ಯವಲ್ಲ, ಕ್ಷೇತ್ರದ ಜನರು ಮುಖ್ಯ. ಸರ್ಕಾರ ನೀಡಿರುವ ಹಣ ಸದುಪಯೋಗ ಆಗಬೇಕು, ಗುಣಮಟ್ಟದ ರಸ್ತೆ ಆಗಬೇಕು ಎಂಬುದು ನನ್ನ ಒತ್ತಾಸೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.</p>.<p>ರಾಂಪುರ-ಆದಿಶಕ್ತಿನಗರ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಹಣದಿಂದ ಜನರಿಗೆ ಅನುಕೂಲವಾಗಬೇಕು, ಇದು ಜನಪ್ರತಿನಿಧಿಯ ಕೆಲಸ ಎಂದರು.</p>.<p>ರಾಂಪುರ ಸರ್ಕಲ್ನಿಂದ ಆದಿಶಕ್ತಿನಗರ-ಕೆ.ಆರ್.ಪೇಟೆ, ಮಾಳಲೂರು ರಸ್ತೆಯವರೆಗೆ 3 ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ₹8 ಕೋಟಿ ವೆಚ್ಚದಲ್ಲಿ ಮಾಡಲಾಗುವುದು. ಕಾಮಗಾರಿಗೆ 2024ರ ಅ.30ರಂದು ಚಾಲನೆ ನೀಡಲಾಗಿತ್ತು. ಇದಕ್ಕೆ ಕೆಲವರು ಮೊದಲು ತಾಂತ್ರಿಕ ಕಾರಣದ ತಡೆ ಒಡ್ಡಿದ್ದರು. ಆಗ ನಾವು ಸುಮ್ಮನಾಗಿದ್ದೆವು ಎಂದು ಹೇಳಿದ್ದರು.</p>.<p>ಈ ಭಾಗದ ಜನ ಹಾಗೂ ಆಟೊ ಚಾಲಕರು ಮೊದಲು ರಾಂಪುರದಿಂದ ಕಾಮಗಾರಿಯನ್ನು ಆರಂಭಿಸಬೇಕೆಂದು ಹೇಳಿದ್ದರು. ರಾಂಪುರ, ಆದಿಶಕ್ತಿ ನಗರ ಗಳಲ್ಲಿ ಹೆಚ್ಚು ಮನೆಗಳಿರು ಪ್ರದೇಶವಾಗಿರುವುದರಿಂದ ಮಳಲೂರು ರಸ್ತೆಯಿಂದ ಕಾಮಗಾರಿ ಆರಂಭಿಸಿದ್ದರು ಎಂದರು.</p>.<p>ಒಂದೂವರೆ ವರ್ಷಗಳಿಂದ ಜನರ ಒತ್ತಡ, ಯಾವುದೇ ಕಾರ್ಯಗಳಿಗೆ ಈ ಭಾಗದಲ್ಲಿ ಓಡಾಡದ ಪರಿಸ್ಥಿತಿ ಇತ್ತು. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಈ ರಸ್ತೆ ಕಾಮಗಾರಿಗೆ ಆಗ್ರಹಿಸುತ್ತಿದ್ದರು. ಪಕ್ಷಾತೀತವಾಗಿ ಜನರು ಕೇಳುತ್ತಿದ್ದರು. ಇಂದು ರಾಂಪುರದಿಂದ ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.</p>.<p>ಕಾಮಗಾರಿ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದರೂ ನಂತರ ಪತ್ರ ವ್ಯವಹಾರ ಆರಂಭಿಸಿದೆ. ಕಾಮಗಾರಿ ಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.</p>.<p>ರಂಗನಾಥ್, ಉಲ್ಲಾಸ್, ಪರಮೇಶ್, ಬೇಬಿ ಜಾನ್, ವಾಜಿದ್, ಕಾರ್ಯಪಾಲಕ ಎಂಜಿನಿಯರ್ ದಿವಾಕರ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-126-1932603691</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>