<p>ಕಳಸ: ಸಂಸೆ ಗ್ರಾಮದ ಕೊಣೆಗೋಡು ಪ್ರದೇಶದ ಸೇತುವೆ ಕಾಮಗಾರಿ ಸಕಾಲಕ್ಕೆ ಮುಗಿಯದೆ ಗ್ರಾಮಸ್ಥರಲ್ಲಿ ನಿರಾಸೆ ಮೂಡಿಸಿದೆ.</p>.<p>ಕೊಣೆಗೋಡು ಪ್ರದೇಶದ ನಿವಾಸಿಗಳಿಗೆ ಮಳೆಗಾಲದಲ್ಲಿ ಸಂಪರ್ಕ ಸೇತುವೆ ಇಲ್ಲದೆ ದ್ವೀಪದಂತಹ ಪ್ರದೇಶದಲ್ಲಿ ಜೀವನ ನಡೆಸುವ ಬಗ್ಗೆ ‘ಪ್ರಜಾವಾಣಿ’ ಕಳೆದ ವರ್ಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿ ಶಾಸಕಿ ನಯನಾ ಮೋಟಮ್ಮ ಅವರು ಸೇತುವೆ ಕಾಮಗಾರಿಗೆಂದು ₹50 ಲಕ್ಷ ಮಂಜೂರು ಮಾಡಿಸಿದ್ದರು. ಆರಂಭಿಕ ಹಂತದಲ್ಲಿ ಕಾಮಗಾರಿ ಕೂಡ ಚುರುಕಾಗಿ ನಡೆದಿತ್ತು. ಮಳೆಗಾಲಕ್ಕೂ ಮುನ್ನವೇ ಸೇತುವೆ ಕೆಲಸ ಮುಗಿಯುವ ನಿರೀಕ್ಷೆ ಮೂಡಿತ್ತು. ಆದರೆ ಒಂದು ತಿಂಗಳಿಂದ ಕಾಮಗಾರಿ ನಿಂತು ಹೋಗಿದೆ. ಆದ್ದರಿಂದ ಸಕಾಲಕ್ಕೆ ಕೆಲಸ ಮುಗಿಯುವ ಬಗ್ಗೆ ಅನುಮಾನ ಮೂಡಿದೆ.</p>.<p>‘ಸೇತುವೆಯ ಪಕ್ಕದ ತಡೆ ಗೋಡೆ ನಿರ್ಮಾಣ, ಮಣ್ಣು ತುಂಬುವ ಕೆಲಸ ಮತ್ತು ಸಂಪರ್ಕ ರಸ್ತೆ ಕಾಮಗಾರಿ ಆರಂಭಿಸಿಲ್ಲ. 10 ದಿನದೊಳಗೆ ಮಳೆಗಾಲ ಆರಂಭ ಆಗುತ್ತದೆ. ಇದರಿಂದ ಈ ವರ್ಷದ ಮಳೆಗಾಲದ ಒಳಗೆ ಸೇತುವೆ ಕೆಲಸ ಮುಗಿಯುವುದು ಅಸಾಧ್ಯವಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಾಪಸ್ ಹೋಗಿದ್ದಾರೆ. ಎಲ್ಲ ಸಲಕರಣೆಗಳು ಸ್ಥಳದಿಂದ ಮಾಯವಾಗಿವೆ. ಈ ವರ್ಷಕ್ಕೂ ನಮಗೆ ತಲೆ ಹೊರೆ, ಕಾಲುಸಂಕ ಅನಿವಾರ್ಯ ಆಗಿದೆ’ ಎಂದು ಗ್ರಾಮದ ಯುವಕ ಮಾಲತೀಶ್ ಬೇಸರದಿಂದ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-126-1851232997</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳಸ: ಸಂಸೆ ಗ್ರಾಮದ ಕೊಣೆಗೋಡು ಪ್ರದೇಶದ ಸೇತುವೆ ಕಾಮಗಾರಿ ಸಕಾಲಕ್ಕೆ ಮುಗಿಯದೆ ಗ್ರಾಮಸ್ಥರಲ್ಲಿ ನಿರಾಸೆ ಮೂಡಿಸಿದೆ.</p>.<p>ಕೊಣೆಗೋಡು ಪ್ರದೇಶದ ನಿವಾಸಿಗಳಿಗೆ ಮಳೆಗಾಲದಲ್ಲಿ ಸಂಪರ್ಕ ಸೇತುವೆ ಇಲ್ಲದೆ ದ್ವೀಪದಂತಹ ಪ್ರದೇಶದಲ್ಲಿ ಜೀವನ ನಡೆಸುವ ಬಗ್ಗೆ ‘ಪ್ರಜಾವಾಣಿ’ ಕಳೆದ ವರ್ಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿ ಶಾಸಕಿ ನಯನಾ ಮೋಟಮ್ಮ ಅವರು ಸೇತುವೆ ಕಾಮಗಾರಿಗೆಂದು ₹50 ಲಕ್ಷ ಮಂಜೂರು ಮಾಡಿಸಿದ್ದರು. ಆರಂಭಿಕ ಹಂತದಲ್ಲಿ ಕಾಮಗಾರಿ ಕೂಡ ಚುರುಕಾಗಿ ನಡೆದಿತ್ತು. ಮಳೆಗಾಲಕ್ಕೂ ಮುನ್ನವೇ ಸೇತುವೆ ಕೆಲಸ ಮುಗಿಯುವ ನಿರೀಕ್ಷೆ ಮೂಡಿತ್ತು. ಆದರೆ ಒಂದು ತಿಂಗಳಿಂದ ಕಾಮಗಾರಿ ನಿಂತು ಹೋಗಿದೆ. ಆದ್ದರಿಂದ ಸಕಾಲಕ್ಕೆ ಕೆಲಸ ಮುಗಿಯುವ ಬಗ್ಗೆ ಅನುಮಾನ ಮೂಡಿದೆ.</p>.<p>‘ಸೇತುವೆಯ ಪಕ್ಕದ ತಡೆ ಗೋಡೆ ನಿರ್ಮಾಣ, ಮಣ್ಣು ತುಂಬುವ ಕೆಲಸ ಮತ್ತು ಸಂಪರ್ಕ ರಸ್ತೆ ಕಾಮಗಾರಿ ಆರಂಭಿಸಿಲ್ಲ. 10 ದಿನದೊಳಗೆ ಮಳೆಗಾಲ ಆರಂಭ ಆಗುತ್ತದೆ. ಇದರಿಂದ ಈ ವರ್ಷದ ಮಳೆಗಾಲದ ಒಳಗೆ ಸೇತುವೆ ಕೆಲಸ ಮುಗಿಯುವುದು ಅಸಾಧ್ಯವಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಾಪಸ್ ಹೋಗಿದ್ದಾರೆ. ಎಲ್ಲ ಸಲಕರಣೆಗಳು ಸ್ಥಳದಿಂದ ಮಾಯವಾಗಿವೆ. ಈ ವರ್ಷಕ್ಕೂ ನಮಗೆ ತಲೆ ಹೊರೆ, ಕಾಲುಸಂಕ ಅನಿವಾರ್ಯ ಆಗಿದೆ’ ಎಂದು ಗ್ರಾಮದ ಯುವಕ ಮಾಲತೀಶ್ ಬೇಸರದಿಂದ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-126-1851232997</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>