<p>ಮೂಡಿಗೆರೆ: ‘ರೈತ ಸಮಾವೇಶದಲ್ಲಿ ನೀಡಿದ ಹೇಳಿಕೆಯು ಭೂಮಿ ಕಳ್ಳರ ವಿರುದ್ಧವಾಗಿದ್ದೇ ವಿನಾ ದುಡಿದು ಬದುಕುವ ಭೂಮಿಪುತ್ರರ ವಿರುದ್ಧ ಅಲ್ಲ’ ಎಂದು ಬಿಎಸ್ಪಿ ಜಿಲ್ಲಾ ಸಂಯೋಜಕ ಯು.ಬಿ. ಮಂಜಯ್ಯ ಹೇಳಿದ್ದಾರೆ.</p>.<p>ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಡವರ ಹೆಸರು ಹೇಳಿ ಭೂಮಿ ನುಂಗುತ್ತಿರುವ ಬಕಾಸುರರ ಅಕ್ರಮ ವ್ಯವಹಾರವನ್ನು ಪ್ರಶ್ನಿಸಿದ್ದನ್ನು ರೈತರ ವಿರುದ್ಧದ ಹೇಳಿಕೆ ಎಂದು ಕೆಲವರು ಬಿಂಬಿಸುತ್ತಿರುವುದು ಸರಿಯಲ್ಲ. ರೈತ ಸಮಾವೇಶದಲ್ಲಿ ಸೇರಿದ್ದವರು ಹಾಗೂ ವೇದಿಕೆಯಲ್ಲಿದ್ದ ಬಹುತೇಕ ಗಣ್ಯರು 50ರಿಂದ 500 ಎಕರೆ ಕಾಫಿ ತೋಟದ ಮಾಲೀಕರು. ಇಷ್ಟೆಲ್ಲಾ ಇದ್ದರೂ ಭೂಮಿ ರಹಿತ ಬಡವರೆಂದು ಸುಳ್ಳು ಹೇಳುತ್ತಾ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಕೆಲವರು ಅರ್ಜಿ ಸಲ್ಲಿಸದೆ ಏಜೆಂಟರ ಮುಖಾಂತರ ನೇರವಾಗಿ ತಾಲ್ಲೂಕು ಆಡಳಿತದಿಂದ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಜಮೀನಿನ ವಿಚಾರವಾಗಿ ಅಕ್ರಮವೆಸಗಿದವರ ವಿರುದ್ಧ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅಕ್ರಮವೆಸಗಿದ ಅಧಿಕಾರಿಗಳಿಗೆ ಹಾಗೂ ಭೂಮಿ ನುಂಗಿದ ಬಕಾಸುರರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.</p>.<p>‘ಜಮೀನು ಇಲ್ಲದವರಿಗೆ ಜಾಗ ಕೊಡಲು, ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಕೊಡಲು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ನಾನು ಸಹ ಫಾರಂ 53ರಲ್ಲಿ ಸರ್ಕಾರದಿಂದ ಭೂಮಿ ಪಡೆದಿದ್ದೇನೆ. ಆದರೆ, ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ನನ್ನ ವಿರುದ್ಧ ಹೇಳಿಕೆ ನೀಡಿರುವವರು ಬಡವರ ಹೆಸರಿನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ಕಬಳಿಸುವ ಕುತಂತ್ರವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಸ್ವಂತ ಬುದ್ಧಿಯಿಂದ ಆಲೋಚಿಸಿ ಮುಂದೆ ಇಂತಹ ರೈತ ಸಮಾವೇಶಗಳಲ್ಲಿ ಭಾಗವಹಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿ’ ಎಂದು ಮನವಿ ಮಾಡಿದರು.</p>.<p>‘ಬಿದರಹಳ್ಳಿ ಗ್ರಾಮದ ಸರ್ವೆ ನಂ.110ರಲ್ಲಿ ಮಂಜೇಗೌಡ ಹಾಗೂ ನಂಜೇಗೌಡ ಎಂಬುವವರಿಗೆ 2010ರಲ್ಲಿ ಜಮೀನು ಮಂಜೂರಾಗಿದೆ. ಆ ವ್ಯಕ್ತಿ ಯಾರೆಂದು ಬಿದರಹಳ್ಳಿ ಗ್ರಾಮಸ್ಥರಿಗೆ ಗೊತ್ತಿಲ್ಲ. ಇದು ಅಕ್ರಮ ಮಂಜೂರಾತಿ ಎಂದು ತಹಶೀಲ್ದಾರ್ಗೆ ದೂರು ನೀಡಿದ್ದಾರೆ. ಇದೇ ರೀತಿ ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿರುವವರಿಗೆ ಅಕ್ರಮವಾಗಿ ಭೂಮಿ ಮಂಜೂರಾಗಿದೆ. ಇವರೆಲ್ಲರೂ ಇಂದು ಭೂಮಿಪುತ್ರರಾಗಿದ್ದಾರೆ’ ಎಂದು ಅವರು ಪ್ರಶ್ನಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-126-1197188994</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡಿಗೆರೆ: ‘ರೈತ ಸಮಾವೇಶದಲ್ಲಿ ನೀಡಿದ ಹೇಳಿಕೆಯು ಭೂಮಿ ಕಳ್ಳರ ವಿರುದ್ಧವಾಗಿದ್ದೇ ವಿನಾ ದುಡಿದು ಬದುಕುವ ಭೂಮಿಪುತ್ರರ ವಿರುದ್ಧ ಅಲ್ಲ’ ಎಂದು ಬಿಎಸ್ಪಿ ಜಿಲ್ಲಾ ಸಂಯೋಜಕ ಯು.ಬಿ. ಮಂಜಯ್ಯ ಹೇಳಿದ್ದಾರೆ.</p>.<p>ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಡವರ ಹೆಸರು ಹೇಳಿ ಭೂಮಿ ನುಂಗುತ್ತಿರುವ ಬಕಾಸುರರ ಅಕ್ರಮ ವ್ಯವಹಾರವನ್ನು ಪ್ರಶ್ನಿಸಿದ್ದನ್ನು ರೈತರ ವಿರುದ್ಧದ ಹೇಳಿಕೆ ಎಂದು ಕೆಲವರು ಬಿಂಬಿಸುತ್ತಿರುವುದು ಸರಿಯಲ್ಲ. ರೈತ ಸಮಾವೇಶದಲ್ಲಿ ಸೇರಿದ್ದವರು ಹಾಗೂ ವೇದಿಕೆಯಲ್ಲಿದ್ದ ಬಹುತೇಕ ಗಣ್ಯರು 50ರಿಂದ 500 ಎಕರೆ ಕಾಫಿ ತೋಟದ ಮಾಲೀಕರು. ಇಷ್ಟೆಲ್ಲಾ ಇದ್ದರೂ ಭೂಮಿ ರಹಿತ ಬಡವರೆಂದು ಸುಳ್ಳು ಹೇಳುತ್ತಾ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಕೆಲವರು ಅರ್ಜಿ ಸಲ್ಲಿಸದೆ ಏಜೆಂಟರ ಮುಖಾಂತರ ನೇರವಾಗಿ ತಾಲ್ಲೂಕು ಆಡಳಿತದಿಂದ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಜಮೀನಿನ ವಿಚಾರವಾಗಿ ಅಕ್ರಮವೆಸಗಿದವರ ವಿರುದ್ಧ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅಕ್ರಮವೆಸಗಿದ ಅಧಿಕಾರಿಗಳಿಗೆ ಹಾಗೂ ಭೂಮಿ ನುಂಗಿದ ಬಕಾಸುರರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.</p>.<p>‘ಜಮೀನು ಇಲ್ಲದವರಿಗೆ ಜಾಗ ಕೊಡಲು, ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಕೊಡಲು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ನಾನು ಸಹ ಫಾರಂ 53ರಲ್ಲಿ ಸರ್ಕಾರದಿಂದ ಭೂಮಿ ಪಡೆದಿದ್ದೇನೆ. ಆದರೆ, ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ನನ್ನ ವಿರುದ್ಧ ಹೇಳಿಕೆ ನೀಡಿರುವವರು ಬಡವರ ಹೆಸರಿನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ಕಬಳಿಸುವ ಕುತಂತ್ರವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಸ್ವಂತ ಬುದ್ಧಿಯಿಂದ ಆಲೋಚಿಸಿ ಮುಂದೆ ಇಂತಹ ರೈತ ಸಮಾವೇಶಗಳಲ್ಲಿ ಭಾಗವಹಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿ’ ಎಂದು ಮನವಿ ಮಾಡಿದರು.</p>.<p>‘ಬಿದರಹಳ್ಳಿ ಗ್ರಾಮದ ಸರ್ವೆ ನಂ.110ರಲ್ಲಿ ಮಂಜೇಗೌಡ ಹಾಗೂ ನಂಜೇಗೌಡ ಎಂಬುವವರಿಗೆ 2010ರಲ್ಲಿ ಜಮೀನು ಮಂಜೂರಾಗಿದೆ. ಆ ವ್ಯಕ್ತಿ ಯಾರೆಂದು ಬಿದರಹಳ್ಳಿ ಗ್ರಾಮಸ್ಥರಿಗೆ ಗೊತ್ತಿಲ್ಲ. ಇದು ಅಕ್ರಮ ಮಂಜೂರಾತಿ ಎಂದು ತಹಶೀಲ್ದಾರ್ಗೆ ದೂರು ನೀಡಿದ್ದಾರೆ. ಇದೇ ರೀತಿ ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿರುವವರಿಗೆ ಅಕ್ರಮವಾಗಿ ಭೂಮಿ ಮಂಜೂರಾಗಿದೆ. ಇವರೆಲ್ಲರೂ ಇಂದು ಭೂಮಿಪುತ್ರರಾಗಿದ್ದಾರೆ’ ಎಂದು ಅವರು ಪ್ರಶ್ನಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-126-1197188994</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>