<p>ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಜಿಲ್ಲಾ ಸಣ್ಣ ಬೆಳೆಗಾರರ ಸಂಘ, ಬೆಳೆಗಾರರ ಹಿತ ರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>ನಗರದ ತಾಲ್ಲೂಕು ಕಚೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ನಗರಸಭೆ ಆವರಣದ ಸಂಸತ್ ಸದಸ್ಯರ ಕಚೇರಿ ಎದುರು ಧರಣಿ ಆಕ್ರೋಶ ಹೊರಹಾಕಿದರು.</p>.<p>ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಹೇಶ್ ಮಾತನಾಡಿ, ‘ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಹುನ್ನಾರದ ಕಾಯ್ದೆಯೇ ಸರ್ಫೇಸಿ. ರೈತರಿಗೆ, ರೈತ ಕುಟುಂಬಗಳಿಗೆ ಮರಣ ಶಾಸನ ಬರೆಯಲು ಹೊರಡಿರುವ ಕಾಯ್ದೆ ಇದು’ ಎಂದು ಹೇಳಿದರು.</p>.<p>ಸಾಲ ಪಡೆದ ಕುಟುಂಬಕ್ಕೆ ನೋಟಿಸ್ ನೀಡಿ ಮಾನವೀಯ ದೃಷ್ಟಿಯಲ್ಲಿ ಮರುಪಾವತಿ ಮಾಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಆನ್ಲೈನ್ ಮೂಲಕ ರೈತನಿಗೆ ಗೊತ್ತೇ ಆಗದಂತೆ ಹರಾಜು ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ನಿಲ್ಲಸಬೇಕು ಎಂದು ಆಗ್ರಹಿಸಿದರು.</p>.<p>ಈ ದೇಶದ ಕಾನೂನು ಒಬ್ಬ ಕೊಲೆಗಾರನಿಗೂ ಕೂಡ ಕೊನೆ ಆಸೆಯನ್ನು ಕೇಳುತ್ತದೆ. ಆದರೆ, ಒಬ್ಬ ರೈತನನ್ನು ಕೇಳದೆ ತನ್ನ ಭೂಮಿಯನ್ನು ಆನ್ಲೈನ್ ಮೂಲಕ ಹರಾಜು ಮಾಡುವುದು ಸರಿಯಲ್ಲ ಎಂದರು.</p>.<p>‘ಜನಪ್ರತಿನಿಧಿಗಳ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವಾಗ ರೈತರ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ರೈತರನ್ನು ಮರೆಯುತ್ತಾರೆ’ ಎಂದು ದೂರಿದರು.</p>.<p>ಈ ವಿಷಯದಲ್ಲಿ ರಿಯಲ್ ಎಸ್ಟೇಟ್ ಹಾಗೂ ಭೂಮಾಫಿಯಾ ಪ್ರವೇಶ ಮಾಡಿದೆ. ರೈತರ ಜಮೀನನ್ನು ಮನಸೋಇಚ್ಛೆ ಹರಾಜು ಮಾಡಿ ಏಜೆಂಟರಿಗೆ ಮಾರಾಟ ಮಾಡಲಾಗುತ್ತಿದೆ. ಆನ್ಲೈನ್ ಮೂಲಕ ಹರಾಜು ಮಾಡಲು ರೈತರಿಗೂ ಒತ್ತಾಯ ಹೇರಲಾಗುತ್ತಿದೆ. ಇದು ಕೂಡ ಕಾಯ್ದೆಯ ಉಲ್ಲಂಘನೆ ಎಂದು ಆರೋಪಿಸಿದರು.</p>.<p>ಕಾಫಿ ಎಂಬುದು ಕೃಷಿಯ ಒಂದು ಭಾಗ. ಈ ಕೃಷಿಯನ್ನು ಸರ್ಫೇಸಿ ಕಾಯ್ದೆಯ ವ್ಯಾಪ್ತಿಗೆ ತರುವುದು ದೊಡ್ಡ ಅನ್ಯಾಯ. ಸರ್ಫೇಸಿ ಕಾಯ್ದೆ ಇದೆ ಎಂಬುದೇ ಕಾಫಿ ಬೆಳೆಗಾರರಲ್ಲಿ ಶೇ 60ರಷ್ಟು ಜನರಿಗೆ ಗೊತ್ತಿಲ್ಲ. ಇದು ರೈತರಿಗೆ ಮಾರಣಾಂತಿಕ ಕಾಯ್ದೆ. ಈ ಕಾಯ್ದೆಯಲ್ಲಿ ರೈತರ ಗಮನಕ್ಕೆ ಬರದೆ ಆನ್ಲೈನ್ ಮೂಲಕ ಹರಾಜು ಮಾಡಲಾಗುತ್ತಿದೆ ಎಂದು ಕೀಡಿ ಕಾರಿದರು.</p>.<p>ಆನ್ಲೈನ್ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲಿದಿದ್ದರೆ ಬ್ಯಾಂಕ್ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.</p>.<p>ರೈತ ಮುಖಂಡ ಗುರುಶಾಂತಪ್ಪ, ಕಾಂಗ್ರೆಸ್ ವಕ್ತಾರ ಎಚ್.ಎಚ್. ದೇವರಾಜ್, ಹೊಲಗದ್ದೆ ಗಿರೀಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-126-1057716913</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಜಿಲ್ಲಾ ಸಣ್ಣ ಬೆಳೆಗಾರರ ಸಂಘ, ಬೆಳೆಗಾರರ ಹಿತ ರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>ನಗರದ ತಾಲ್ಲೂಕು ಕಚೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ನಗರಸಭೆ ಆವರಣದ ಸಂಸತ್ ಸದಸ್ಯರ ಕಚೇರಿ ಎದುರು ಧರಣಿ ಆಕ್ರೋಶ ಹೊರಹಾಕಿದರು.</p>.<p>ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಹೇಶ್ ಮಾತನಾಡಿ, ‘ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಹುನ್ನಾರದ ಕಾಯ್ದೆಯೇ ಸರ್ಫೇಸಿ. ರೈತರಿಗೆ, ರೈತ ಕುಟುಂಬಗಳಿಗೆ ಮರಣ ಶಾಸನ ಬರೆಯಲು ಹೊರಡಿರುವ ಕಾಯ್ದೆ ಇದು’ ಎಂದು ಹೇಳಿದರು.</p>.<p>ಸಾಲ ಪಡೆದ ಕುಟುಂಬಕ್ಕೆ ನೋಟಿಸ್ ನೀಡಿ ಮಾನವೀಯ ದೃಷ್ಟಿಯಲ್ಲಿ ಮರುಪಾವತಿ ಮಾಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಆನ್ಲೈನ್ ಮೂಲಕ ರೈತನಿಗೆ ಗೊತ್ತೇ ಆಗದಂತೆ ಹರಾಜು ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ನಿಲ್ಲಸಬೇಕು ಎಂದು ಆಗ್ರಹಿಸಿದರು.</p>.<p>ಈ ದೇಶದ ಕಾನೂನು ಒಬ್ಬ ಕೊಲೆಗಾರನಿಗೂ ಕೂಡ ಕೊನೆ ಆಸೆಯನ್ನು ಕೇಳುತ್ತದೆ. ಆದರೆ, ಒಬ್ಬ ರೈತನನ್ನು ಕೇಳದೆ ತನ್ನ ಭೂಮಿಯನ್ನು ಆನ್ಲೈನ್ ಮೂಲಕ ಹರಾಜು ಮಾಡುವುದು ಸರಿಯಲ್ಲ ಎಂದರು.</p>.<p>‘ಜನಪ್ರತಿನಿಧಿಗಳ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವಾಗ ರೈತರ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ರೈತರನ್ನು ಮರೆಯುತ್ತಾರೆ’ ಎಂದು ದೂರಿದರು.</p>.<p>ಈ ವಿಷಯದಲ್ಲಿ ರಿಯಲ್ ಎಸ್ಟೇಟ್ ಹಾಗೂ ಭೂಮಾಫಿಯಾ ಪ್ರವೇಶ ಮಾಡಿದೆ. ರೈತರ ಜಮೀನನ್ನು ಮನಸೋಇಚ್ಛೆ ಹರಾಜು ಮಾಡಿ ಏಜೆಂಟರಿಗೆ ಮಾರಾಟ ಮಾಡಲಾಗುತ್ತಿದೆ. ಆನ್ಲೈನ್ ಮೂಲಕ ಹರಾಜು ಮಾಡಲು ರೈತರಿಗೂ ಒತ್ತಾಯ ಹೇರಲಾಗುತ್ತಿದೆ. ಇದು ಕೂಡ ಕಾಯ್ದೆಯ ಉಲ್ಲಂಘನೆ ಎಂದು ಆರೋಪಿಸಿದರು.</p>.<p>ಕಾಫಿ ಎಂಬುದು ಕೃಷಿಯ ಒಂದು ಭಾಗ. ಈ ಕೃಷಿಯನ್ನು ಸರ್ಫೇಸಿ ಕಾಯ್ದೆಯ ವ್ಯಾಪ್ತಿಗೆ ತರುವುದು ದೊಡ್ಡ ಅನ್ಯಾಯ. ಸರ್ಫೇಸಿ ಕಾಯ್ದೆ ಇದೆ ಎಂಬುದೇ ಕಾಫಿ ಬೆಳೆಗಾರರಲ್ಲಿ ಶೇ 60ರಷ್ಟು ಜನರಿಗೆ ಗೊತ್ತಿಲ್ಲ. ಇದು ರೈತರಿಗೆ ಮಾರಣಾಂತಿಕ ಕಾಯ್ದೆ. ಈ ಕಾಯ್ದೆಯಲ್ಲಿ ರೈತರ ಗಮನಕ್ಕೆ ಬರದೆ ಆನ್ಲೈನ್ ಮೂಲಕ ಹರಾಜು ಮಾಡಲಾಗುತ್ತಿದೆ ಎಂದು ಕೀಡಿ ಕಾರಿದರು.</p>.<p>ಆನ್ಲೈನ್ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲಿದಿದ್ದರೆ ಬ್ಯಾಂಕ್ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.</p>.<p>ರೈತ ಮುಖಂಡ ಗುರುಶಾಂತಪ್ಪ, ಕಾಂಗ್ರೆಸ್ ವಕ್ತಾರ ಎಚ್.ಎಚ್. ದೇವರಾಜ್, ಹೊಲಗದ್ದೆ ಗಿರೀಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-126-1057716913</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>