<p><strong>ಚಿಕ್ಕಮಗಳೂರು</strong>: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ನಂತರ ಡಿ.ಎನ್. ಜೀವರಾಜ್ ಅಥವಾ ಟಿ.ಡಿ.ರಾಜೇಗೌಡ ಅವರು ಪಡೆಯುವ ಮತಗಳಲ್ಲಿ ವ್ಯತ್ಯಾಸ ಕಂಡುಬಂದರೆ ಫಲಿತಾಂಶ ಘೋಷಣೆ ಮಾಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತ್ತು.</p>.<p>2023ರಲ್ಲಿ ಎಣಿಕೆ ವೇಳೆ ತಿರಸ್ಕೃತ ಗೊಂಡಿದ್ದ 279 ಮತಗಳಲ್ಲಿ ಯಾವುದಾ ದರೂ ಮತ ಮರು ಎಣಿಕೆ ವೇಳೆ ಮಾನ್ಯವಾದರೆ ಅವುಗಳನ್ನು ಹಿಂದೆಯೇ ಸಿಂಧುವಾಗಿದ್ದ ಮತಗಳ ಜತೆಗೆ ಸೇರಿಸಿ, ಎಲ್ಲ ಅಂಚೆ ಮತಗಳನ್ನು ಎಣಿಕೆ ಮಾಡ ಬೇಕು’ ಎಂದು ಆದೇಶದಲ್ಲಿ ತಿಳಿಸಿತ್ತು.</p>.<p>ಶನಿವಾರ (ಮೇ 2) ಬೆಳಿಗ್ಗೆ ಆರಂಭವಾಗಿದ್ದ ಮತ ಎಣಿಕೆ ರಾತ್ರಿ 2 ಗಂಟೆ ತನಕವೂ ನಡೆಯಿತು. ಮತಪತ್ರಗಳನ್ನು ಸ್ಟ್ರಾಂಗ್ ರೂಮಿಗೆ ತಲುಪಿಸಿದ ನಂತರ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಚುನಾವಣಾಧಿಕಾರಿ ಗೌರವಕುಮಾರ್ ಶೆಟ್ಟಿ ಮಾಧ್ಯಮಗಳಿಗೆ ವಿವರ ನೀಡಿದ್ದರು.</p>.<p>‘ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗಿದೆ. ಫಲಿತಾಂಶ ಘೋಷಣೆಗೆ ನನಗೆ ಸ್ಪಷ್ಟ ನಿರ್ದೇಶನ ಇಲ್ಲ. ಎಲೆಕ್ಟ್ರಾನಿಕ್ ಮತಯಂತ್ರಗಳ ಮತಗಳನ್ನು ನಾನು ಎಣಿಕೆ ಮಾಡಿಲ್ಲ. ಅಂಚೆ ಮತಗಳನ್ನಷ್ಟೇ ಎಣಿಕೆ ಮಾಡಿ ಫಲಿತಾಂಶ ಘೋಷಣೆ ಮಾಡಲು ಆಗುವುದಿಲ್ಲ. ನ್ಯಾಯಾಲಯದಲ್ಲಿ ಫಲಿತಾಂಶ ಘೋಷಣೆಯಾಗಲಿದೆ’ ಎಂದೂ ಸ್ಪಷ್ಟಪಡಿಸಿದ್ದರು.</p>.<p>ಆದರೆ, ಭಾನುವಾರ ರಾತ್ರಿ ವೇಳೆಗೆ ಫಲಿತಾಂಶ ಘೋಷಿಸಿದ ಚುನಾವಣಾಧಿಕಾರಿ, ಸೋಮವಾರ ಬೆಳಿಗ್ಗೆ ಡಿ.ಎನ್.ಜೀವರಾಜ್ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.</p>.<p>ಮರು ಮತ ಎಣಿಕೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ, ‘ಈಗಿರುವ ಫಲಿತಾಂಶ ವ್ಯತ್ಯಾಸವಾದರೆ ಆಯೋಗದ ಅನುಮತಿ ಪಡೆದು ಘೋಷಣೆ ಮಾಡಲಾ ಗುವುದು’ ಎಂದೂ ತಿಳಿಸಿದ್ದರು.</p>.<p>ಈ ಕುರಿತು ಸ್ಪಷ್ಟನೆ ಪಡೆಯಲು ಗೌರವಕುಮಾರ್ ಶೆಟ್ಟಿ ಅವರಿಗೆ ಹಲವು ಬಾರಿ ಕರೆ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260506-51-1710682375</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ನಂತರ ಡಿ.ಎನ್. ಜೀವರಾಜ್ ಅಥವಾ ಟಿ.ಡಿ.ರಾಜೇಗೌಡ ಅವರು ಪಡೆಯುವ ಮತಗಳಲ್ಲಿ ವ್ಯತ್ಯಾಸ ಕಂಡುಬಂದರೆ ಫಲಿತಾಂಶ ಘೋಷಣೆ ಮಾಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತ್ತು.</p>.<p>2023ರಲ್ಲಿ ಎಣಿಕೆ ವೇಳೆ ತಿರಸ್ಕೃತ ಗೊಂಡಿದ್ದ 279 ಮತಗಳಲ್ಲಿ ಯಾವುದಾ ದರೂ ಮತ ಮರು ಎಣಿಕೆ ವೇಳೆ ಮಾನ್ಯವಾದರೆ ಅವುಗಳನ್ನು ಹಿಂದೆಯೇ ಸಿಂಧುವಾಗಿದ್ದ ಮತಗಳ ಜತೆಗೆ ಸೇರಿಸಿ, ಎಲ್ಲ ಅಂಚೆ ಮತಗಳನ್ನು ಎಣಿಕೆ ಮಾಡ ಬೇಕು’ ಎಂದು ಆದೇಶದಲ್ಲಿ ತಿಳಿಸಿತ್ತು.</p>.<p>ಶನಿವಾರ (ಮೇ 2) ಬೆಳಿಗ್ಗೆ ಆರಂಭವಾಗಿದ್ದ ಮತ ಎಣಿಕೆ ರಾತ್ರಿ 2 ಗಂಟೆ ತನಕವೂ ನಡೆಯಿತು. ಮತಪತ್ರಗಳನ್ನು ಸ್ಟ್ರಾಂಗ್ ರೂಮಿಗೆ ತಲುಪಿಸಿದ ನಂತರ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಚುನಾವಣಾಧಿಕಾರಿ ಗೌರವಕುಮಾರ್ ಶೆಟ್ಟಿ ಮಾಧ್ಯಮಗಳಿಗೆ ವಿವರ ನೀಡಿದ್ದರು.</p>.<p>‘ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗಿದೆ. ಫಲಿತಾಂಶ ಘೋಷಣೆಗೆ ನನಗೆ ಸ್ಪಷ್ಟ ನಿರ್ದೇಶನ ಇಲ್ಲ. ಎಲೆಕ್ಟ್ರಾನಿಕ್ ಮತಯಂತ್ರಗಳ ಮತಗಳನ್ನು ನಾನು ಎಣಿಕೆ ಮಾಡಿಲ್ಲ. ಅಂಚೆ ಮತಗಳನ್ನಷ್ಟೇ ಎಣಿಕೆ ಮಾಡಿ ಫಲಿತಾಂಶ ಘೋಷಣೆ ಮಾಡಲು ಆಗುವುದಿಲ್ಲ. ನ್ಯಾಯಾಲಯದಲ್ಲಿ ಫಲಿತಾಂಶ ಘೋಷಣೆಯಾಗಲಿದೆ’ ಎಂದೂ ಸ್ಪಷ್ಟಪಡಿಸಿದ್ದರು.</p>.<p>ಆದರೆ, ಭಾನುವಾರ ರಾತ್ರಿ ವೇಳೆಗೆ ಫಲಿತಾಂಶ ಘೋಷಿಸಿದ ಚುನಾವಣಾಧಿಕಾರಿ, ಸೋಮವಾರ ಬೆಳಿಗ್ಗೆ ಡಿ.ಎನ್.ಜೀವರಾಜ್ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.</p>.<p>ಮರು ಮತ ಎಣಿಕೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ, ‘ಈಗಿರುವ ಫಲಿತಾಂಶ ವ್ಯತ್ಯಾಸವಾದರೆ ಆಯೋಗದ ಅನುಮತಿ ಪಡೆದು ಘೋಷಣೆ ಮಾಡಲಾ ಗುವುದು’ ಎಂದೂ ತಿಳಿಸಿದ್ದರು.</p>.<p>ಈ ಕುರಿತು ಸ್ಪಷ್ಟನೆ ಪಡೆಯಲು ಗೌರವಕುಮಾರ್ ಶೆಟ್ಟಿ ಅವರಿಗೆ ಹಲವು ಬಾರಿ ಕರೆ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260506-51-1710682375</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>