<p>ತರೀಕೆರೆ: ಪಟ್ಟಣ ಸಮೀಪದ ಅತ್ತಿಗನಾಳು ಮತ್ತು ದ್ಯಾಂಪುರ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುಮಾರು ಮೂರರಿಂದ ನಾಲ್ಕು ಕಾಡಾನೆಗಳು ದಾಳಿ ಮಾಡಿ ಅಡಿಕೆ, ತೆಂಗು, ಬಾಳೆ ಮತ್ತಿತರೆ ಬೆಳೆ ಮತ್ತು ತಂತಿ ಬೇಲಿಯನ್ನು ನಾಶ ಮಾಡಿವೆ.</p>.<p>ಭಾನುವಾರ ಸಂಜೆ 6.50ರ ಸುಮಾರಿಗೆ ಒಂದು ಮರಿ ಆನೆ ಮತ್ತು ಎರಡು ದೊಡ್ಡ ಆನೆಗಳು ಜಮೀನಿನಲ್ಲಿ ತಿರುಗಾಡುತ್ತಿರುವುದು ಅತ್ತಿಗನಾಳು ಗ್ರಾಮದ ರಂಗಸ್ವಾಮಿ ಅವರ ಜಮೀನಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅತ್ತಿಗನಾಳು ಅರಣ್ಯ ಭಾಗದಿಂದ ಬಂದ ಈ ಆನೆಗಳು ಅತ್ತಿಗನಾಳು ಮತ್ತು ದ್ಯಾಂಪುರ ಭಾಗದ ಹಲವು ರೈತರ ತೋಟಗಳಿಗೆ ಹಾಕಿರುವ ಸೋಲಾರ್ ಬೇಲಿಯನ್ನು ತುಳಿದು ಹಾಳು ಮಾಡಿವೆ ಎಂದು ರೈತರು ತಿಳಿಸಿದ್ದಾರೆ.</p>.<p>ಈ ಭಾಗದ ರೈತರು ಕಾಡಾನೆಗಳ ಉಪಟಳದಿಂದ ಪ್ರತಿ ವರ್ಷ ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ತೋಟದ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್ ಮತ್ತು ಪೈಪ್ಗಳನ್ನು ಕಿತ್ತು ಹಾಕಿ ಹಾಳು ಮಾಡುತ್ತಿವೆ. ಈ ಭಾಗದಲ್ಲಿ ಶೀಘ್ರ ಇಪಿಟಿ ಟ್ರಂಚ್ ತೆಗೆದು ಆನೆಗಳು ಜಮೀನುಗಳತ್ತ ಬರುವುದನ್ನು ನಿಯಂತ್ರಿಸಬೇಕು ರೈತರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-126-140087677</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತರೀಕೆರೆ: ಪಟ್ಟಣ ಸಮೀಪದ ಅತ್ತಿಗನಾಳು ಮತ್ತು ದ್ಯಾಂಪುರ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುಮಾರು ಮೂರರಿಂದ ನಾಲ್ಕು ಕಾಡಾನೆಗಳು ದಾಳಿ ಮಾಡಿ ಅಡಿಕೆ, ತೆಂಗು, ಬಾಳೆ ಮತ್ತಿತರೆ ಬೆಳೆ ಮತ್ತು ತಂತಿ ಬೇಲಿಯನ್ನು ನಾಶ ಮಾಡಿವೆ.</p>.<p>ಭಾನುವಾರ ಸಂಜೆ 6.50ರ ಸುಮಾರಿಗೆ ಒಂದು ಮರಿ ಆನೆ ಮತ್ತು ಎರಡು ದೊಡ್ಡ ಆನೆಗಳು ಜಮೀನಿನಲ್ಲಿ ತಿರುಗಾಡುತ್ತಿರುವುದು ಅತ್ತಿಗನಾಳು ಗ್ರಾಮದ ರಂಗಸ್ವಾಮಿ ಅವರ ಜಮೀನಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅತ್ತಿಗನಾಳು ಅರಣ್ಯ ಭಾಗದಿಂದ ಬಂದ ಈ ಆನೆಗಳು ಅತ್ತಿಗನಾಳು ಮತ್ತು ದ್ಯಾಂಪುರ ಭಾಗದ ಹಲವು ರೈತರ ತೋಟಗಳಿಗೆ ಹಾಕಿರುವ ಸೋಲಾರ್ ಬೇಲಿಯನ್ನು ತುಳಿದು ಹಾಳು ಮಾಡಿವೆ ಎಂದು ರೈತರು ತಿಳಿಸಿದ್ದಾರೆ.</p>.<p>ಈ ಭಾಗದ ರೈತರು ಕಾಡಾನೆಗಳ ಉಪಟಳದಿಂದ ಪ್ರತಿ ವರ್ಷ ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ತೋಟದ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್ ಮತ್ತು ಪೈಪ್ಗಳನ್ನು ಕಿತ್ತು ಹಾಕಿ ಹಾಳು ಮಾಡುತ್ತಿವೆ. ಈ ಭಾಗದಲ್ಲಿ ಶೀಘ್ರ ಇಪಿಟಿ ಟ್ರಂಚ್ ತೆಗೆದು ಆನೆಗಳು ಜಮೀನುಗಳತ್ತ ಬರುವುದನ್ನು ನಿಯಂತ್ರಿಸಬೇಕು ರೈತರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260324-126-140087677</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>