‘ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎರಡು ಟ್ಯಾಬ್ಲೋ ತಂಡಗಳು ಪ್ರಚಾರ ನನ್ನ ಪರವಾಗಿ ಪ್ರಚಾರ ನಡೆಸುತ್ತಿವೆ. ಒಂದು ತಂಡದಲ್ಲಿ ಮನಶಾಸ್ತ್ರಜ್ಞೆ ಜಯಶ್ರೀಭಟ್ ಹಾಗೂ ಮತ್ತೊಂಡು ತಂಡದಲ್ಲಿ ಕವಿ ಶಾಹಿದ್ ಅಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಬಲಿಷ್ಠ ಅಭ್ಯರ್ಥಿಗಳ ಎದುರು ಮತದಾರರು ನನ್ನೊಂದಿಗೆ ಬಹಿರಂಗವಾಗಿ ಗುರತಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಆದರೆ ನನಗೆ ಮತನೀಡುವುದಾಗಿ ಭರವಸೆ ನೀಡಿದ್ದಾರೆ.ಅದರಿಂದ ಗೆಲ್ಲುವ ವಿಶ್ವಾಸ ಇಮ್ಮಡಿಯಾಗಿದೆ’ ಎಂದರು.