‘ಬೆಂಗಳೂರಿಗೆ ಹೋಗಲು ಇದೇ 21ರಂದು ರಾತ್ರಿ 11.55ರ ಹೊತ್ತಿಗೆ ನಗರದ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಬಂದಿದ್ದಾಗ, ಮಪ್ತಿಯಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಮತ್ತು ಅವರ ಸ್ನೇಹಿತರು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದರು. ಸ್ಥಳಕ್ಕೆ ಬಂದ ಪಿಎಸ್ಐ ರಘು ಅವರು ಜೀಪಿನಲ್ಲಿ ಠಾಣೆಗೆ ಒಯ್ದು ಹಿಗ್ಗಾಮುಗ್ಗಾ ಥಳಿಸಿದರು. ಥಳಿತದಿಂದ ಎಡಭಾಗದ ಎಡಗಣ್ಣಿಗೆ ಗಾಯವಾಗಿದೆ, ಬಲಗಣ್ಣಿಗೂ ಪೆಟ್ಟಾಗಿದೆ’ ಎಂದು ಶಿವಣ್ಣ ದೂರಿನಲ್ಲಿ ತಿಳಿಸಿದ್ದಾರೆ.