ಶೃಂಗೇರಿ (ಚಿಕ್ಕಮಗಳೂರು): ಶೃಂಗೇರಿಯ 15 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದ ಎಲ್ಲ ಅರೋಪಿಗಳನ್ನು ಬಂಧಿಸಬೇಕು, ತಪ್ಪಿತಸ್ಥ ರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರಯ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ನ ಡಾ.ಪುಷ್ಪಾಅಮರನಾಥ್, ರೇಖಾಹುಲಿಯಪ್ಪಗೌಡ, ಡಾ.ಅಂಶುಮಂತ್, ಇತರರು ಭಾಗವಹಿಸಿದ್ದರು.